ಮಾ. 7 ಮತ್ತು 8ರಂದು ಬೆಂಗಳೂರಿನಲ್ಲಿ ನಡೆಯಲಿದೆ ಇಂಡಿಯಾ ಗ್ಲೋಬಲ್ ಫೋರಂ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಾ. 7 ಮತ್ತು 8 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯಾ ಗ್ಲೋಬಲ್ ಫೋರಮ್ (ಐಜಿಎಫ್)ನಲ್ಲಿ ಭಾಗವಹಿಸಲಿದ್ದಾರೆ.

ಐಜಿಎಫ್ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಜಾಗತಿಕ ನಾಯಕರಿಗೆ ಕಾರ್ಯಸೂಚಿ-ಹೊಂದಿಸುವ ವೇದಿಕೆಯಾಗಿದೆ. ಅಂತಾರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ನೀತಿ ನಿರೂಪಕರಿಗೆ ತಮ್ಮ ವಲಯಗಳು ಮತ್ತು ಭೌಗೋಳಿಕವಾದ ಕಾರ್ಯತಂತ್ರದ ಪ್ರಮುಖ ವಿಷಯಗಳಲ್ಲಿ ಪಾಲುದಾರರೊಂದಿಗೆ ಸಂವಹನ ನಡೆಸಲು ವೇದಿಕೆ ಆಯ್ಕೆ ನೀಡುತ್ತದೆ. ಇದು ಬೆಂಗಳೂರಿನಲ್ಲಿ ಐಜಿಎಫ್ ನ ಮೊದಲ ಆವೃತ್ತಿಯಾಗಿದೆ. ಹಿಂದಿನ ಆವೃತ್ತಿಗಳನ್ನು ದುಬೈ ಮತ್ತು ಯುಕೆಯಲ್ಲಿ ಆಯೋಜಿಸಲಾಗಿತ್ತು.

ಬೆಂಗಳೂರು ಐಜಿಎಫ್ ನಲ್ಲಿ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಉದ್ಯಮದ ಇತರ ಪ್ರಮುಖ ಸಿಇಒಗಳು, ದಿಗ್ಗಜರು ಸಭೆಗೆ ಸಾಕ್ಷಿಯಾಗಲಿದ್ದಾರೆ. ಯೂನಿಕಾರ್ನ್‌ಗಳ ಜೊತೆಗಿನ ಬಹು ನಿರೀಕ್ಷಿತ ಅಧಿವೇಶನದಲ್ಲಿ 30 ಸಿಇಒಗಳು ಮತ್ತು ಯೂನಿಕಾರ್ನ್‌ಗಳ ಸಂಸ್ಥಾಪಕರು ಸಚಿವರೊಂದಿಗೆ ಮುಕ್ತ ಚರ್ಚೆಯನ್ನು ನಡೆಸಲಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದ್ದು, ಭಾರತವು ಸುಧಾರಿತ, ದೃಢ ನಿಶ್ಚಯ ಮತ್ತು ಚೇತರಿಸಿಕೊಳ್ಳುವ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ವೇದಿಕೆ ಸಭೆ ನಡೆಯುತ್ತಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ವ್ಯಾಪಕ ಅಡ್ಡಿಗಳ ನಡುವೆಯೂ ಭಾರತವು 2021ರಲ್ಲಿ 42 ಯೂನಿಕಾರ್ನ್‌ಗಳನ್ನು ತಿಂಗಳಿಗೆ 3ಕ್ಕಿಂತ ಹೆಚ್ಚು ದರದಲ್ಲಿ ಸುಮಾರು 90 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಸೃಷ್ಟಿಯಾಗಿವೆ. 60,000ಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳೊಂದಿಗೆ ಭಾರತವು ಈಗ 3ನೇ ಅತಿದೊಡ್ಡ ಮತ್ತು ವಿಶ್ವದ ಅತ್ಯಂತ ಕ್ರಿಯಾಶೀಲ ನವೋದ್ಯಮ ಪೂರಕ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಕಳೆದ 2 ವರ್ಷಗಳಲ್ಲಿ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಡಿಜಿಟಲೀಕರಣದಲ್ಲಿ ದೇಶ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಿದೆ. 82 ಕೋಟಿ ಭಾರತೀಯರು ಅಂತರ್ಜಾಲ ಸೇವೆ ಪಡೆಯುತ್ತಿದ್ದಾರೆ. 60 ಕೋಟಿ ಸ್ಮಾರ್ಟ್ ಫೋನ್ ಬಳಕೆದಾರರು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಹಾಗೂ ಇನ್ನಷ್ಟು ತೀವ್ರಗೊಳಿಸುವ ಸರಕಾರದ ಒತ್ತಾಸೆಯೊಂದಿಗೆ ಡಿಜಿಟಲ್ ಆರ್ಥಿಕತೆಯು ಭಾರತೀಯ ಆರ್ಥಿಕತೆಯ ಬೆಳವಣಿಗೆಯನ್ನು ಗಣನೀಯವಾಗಿ ವೇಗವರ್ಧನೆ ಮಾಡಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 5 ಟ್ರಿಲಿಯನ್ ಡಾಲರ್ ಗುರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಪ್ರಕಟಿಸಲಾದ ಬಜೆಟ್ 2022 ಡಿಜಿಟಲ್ ವಲಯದಲ್ಲಿನ ಬೆಳವಣಿಗೆ, ಹೂಡಿಕೆಗಳು ಮತ್ತು ಉದ್ಯೋಗಗಳಿಗೆ ಅವಕಾಶಗಳನ್ನು ವಿಸ್ತರಿಸಲು ದಾರಿ ಮಾಡಿಕೊಡುತ್ತದೆ.

ಬೆಂಗಳೂರಿನ ಐಜಿಎಫ್ ನ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಚಿವ ರಾಜೀವ್ ಚಂದ್ರಶೇಖರ್, ಭಾರತವು ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ಉತ್ತಮ ಚೇತರಿಕೆಯನ್ನು ತೋರಿದೆ. ಹಾಗೆಯೇ ತ್ವರಿತ ಪುನಃಶ್ಚೇತನ ಪ್ರದರ್ಶಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ್ ಆರ್ಥಿಕ ಮಾರ್ಗಸೂಚಿಯೊಂದಿಗೆ ಭಾರತವು ತನ್ನ ಆರ್ಥಿಕತೆಯ ಪ್ರಮುಖ ರೂಪಾಂತರ ಮತ್ತು ವಿಸ್ತರಣೆಯ ಮಧ್ಯಭಾಗದಲ್ಲಿದೆ. ಡಿಜಿಟಲ್ ಮತ್ತು ತಾಂತ್ರಿಕ ಅವಕಾಶಗಳು ಈ ಪರಿವರ್ತನೆಯನ್ನು ಹಾಗೂ ಭಾರತದ ತಾಂತ್ರಿಕ ಯುಗವನ್ನು ಮುನ್ನಡೆಸುತ್ತಿವೆ. ಇಂಡಿಯಾ ಗ್ಲೋಬಲ್ ಫೋರಂ ಬೆಂಗಳೂರು ‘ದಿ ನ್ಯೂ ಇಂಡಿಯಾ ಇಂಕ್’ನ ಹೊಸ ಯುಗಕ್ಕೆ ಕಾಲಿಡಲು ಅತ್ಯುತ್ತಮ ವೇದಿಕೆ ಒದಗಿಸುತ್ತದೆ. ಇದರಲ್ಲಿ ಭಾಗವಹಿಸಲು ನಾನು ತುಂಬಾ ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!