ನೆಹರು, ವಾಜಪೇಯಿಯವರ ಮೂರ್ಖತನದಿಂದ ಟಿಬೆಟ್, ತೈವಾನ್ ಚೀನಾ ಪಾಲಾಯಿತು: ಸುಬ್ರಮಣಿಯನ್ ಸ್ವಾಮಿ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದ ಟಿಬೇಟ್‌ ಮತ್ತು ತೈವಾನ್‌ ಚೀನಾದ ವಶವಾಯಿತು ಎಂದು ಮಾಜಿ ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸುಬ್ರಮಣಿಯನ್‌ ಸ್ವಾಮಿ “ಚೀನಾ ಈಗ ಪರಸ್ಪರ ಒಪ್ಪಿದ ಎಲ್‌ಎಸಿ(ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್) ಅನ್ನು ಗೌರವಿಸುವುದಿಲ್ಲ. ಅದೂ ಅಲ್ಲದೇ ಲಡಾಕ್‌ನ ಕೆಲ ಭಾಗಗಳನ್ನೂ ಕೂಡ ವಶಪಡಿಸಿಕೊಂಡಿದೆ” ಎಂದ ಅವರು ಪ್ರಧಾನಿ ಮೋದಿಯವರನ್ನೂ ಟೀಕಿಸಿದ್ದಾರೆ. “ಗಡಿಯಲ್ಲಿ ಚೀನಾ ಆಕ್ರಮಿಸಿಕೊಂಡಿದ್ದರೂ ಮೋದಿ ಮಾತ್ರ ಕೋಯಿ ಆಯಾ ನಹೀನ್ (ಯಾರೂ ಬಂದಿಲ್ಲ) ಎನ್ನುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.

ಚೀನಾದ ಪುನರಾವರ್ತಿತ ‘ಎಚ್ಚರಿಕೆ’ಗಳ ಹೊರತಾಗಿಯೂ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಸ್ವಾಮಿಯವರ ಈ ಹೇಳಿಕೆ ಹೊರಬಿದ್ದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!