ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೀಗ ಆರಂಭವಾಗಿದೆ.
ಪಾರ್ಲ್ನ ಬೋಲ್ಯಾಂಡ್ನಲ್ಲಿ ಪಂದ್ಯ ಆರಂಭವಾಗಿದ್ದು, ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದೆ.
ಈ ಪಂದ್ಯದ ಮೂಲಕ ವೆಂಕಟೇಶರ್ ಅಯ್ಯರ್ ಭಾರತ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಈಗಾಗಲೇ ಒಂದು ಬಾರಿ ಸೋಲುಂಡಿರುವ ಭಾರತ, ಗೆಲುವಿಗೆ ಭರ್ಜರಿ ತಯಾರಿ ನಡೆಸಿದೆ. ಈ ಸರಣಿ ಗೆದ್ದು ಸೋತ ಸರಣಿಗೆ ಸರಿದೂಗಿಸುವ ಲೆಕ್ಕದಲ್ಲಿ ಭಾರತ ಇದ್ದರೆ, ಒಂದು ಗೆಲುವಿನಿಂದ ಸ್ಫೂರ್ತಿ ಪಡೆದು ಮತ್ತೊಂದು ಗೆಲುವಿನ ಆಸೆಯಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ.
ತಂಡದಲ್ಲಿ ಕೆ.ಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೋಹ್ಲಿ, ರಿಷಭ್ ಪಂತ್. ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್. ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಯಜ್ವೇಂದ್ರ ಚಹಾಲ್ ಇದ್ದಾರೆ.