ಅಕ್ರಮವಾಗಿ ಕಬ್ಬಿಣದ ಅದಿರು ಸಾಗಾಣೆ: 8 ಜನರ ಬಂಧನ

ಹೊಸದಿಗಂತ ವರದಿ, ಹೊಸಪೇಟೆ:

ಅಕ್ರಮವಾಗಿ ಕಬ್ಬಿಣದ ಅದಿರು ಸಂಗ್ರಹಿಸಿ ಸಾಗಾಣೆ ಮಾಡುತ್ತಿದ್ದ 8 ಜನ ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಅದಿರು ಸಮೇತ ಬಂಧಿಸುವಲ್ಲಿ ಯಶಸ್ಚಿಯಾಗಿದ್ದಾರೆ.
ದಾಳಿ‌ಮಾಡಿರುವ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿದ್ದ 2.88 ಲಕ್ಷ ಮೌಲ್ಯದ 96 ಟನ್ ಕಬ್ಬಿಣದ ಅದಿರು, 3 ಲಾರಿ, 1 ಜೆಸಿಬಿ, ಸ್ಕಾರ್ಪಿಯೋ, ಸ್ವಿಫ್ಟ್ ಡಿಸೈರ್ ಕಾರು ಹಾಗೂ 8 ಜನ ಆರೋಪಿಗಳನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ಕಾರಿಗನೂರು ಹಾಗೂ ಕೂಡ್ಲಿಗಿ ಮೂಲದ ಹನುಮಂತಪ್ಪ, ಎಂ ಮಂಜುನಾಥ, ಡಿ. ಅಬ್ದುಲ್ ಸಲೀಂ, ಬಿ. ಹನುಮಂತ, ಸಿ. ರಂಜೀತ್, ಅಜ್ಮತ್ ಉಲ್ಲಾ, ಕೃಷ್ಣ ಹಾಗೂ ಸಿದ್ದಪ್ಪ ಬಂಧತರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರು ತಿಳಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!