ದಿಗಂತ ವರದಿ ಮೈಸೂರು:
ಆನ್ ಲೈನ್ ವಂಚನೆ ಮೂಲಕ ಹಣ ಕಳೆದುಕೊಂಡಿದ್ದ ಐವರಿಗೆ, ಅವರು ಕಳೆದುಕೊಂಡಿದ್ದ ಹಣವನ್ನು ಕ್ರೆöÊ ಪೊಲೀಸರು ವಾಪಾಸ್ ಕೊಡಿಸಿದ್ದಾರೆ.
ಮೈಸೂರು ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ, ಸೈಬರ್ ಕ್ರೈಂ ಗೆ ಸಂಬಂಧಿಸಿದಂತೆ ಶಾರದ ನಗರದ ಡಾ. ವೆಂಕಟಸುಬ್ಬಯ್ಯರು ಕ್ರೆಡಿಟ್ ಕಾರ್ಡ್ನಿಂದ ಒಟ್ಟು 1,93,056 ರೂ, ಚೆಲುವಾಂಬ ಅಗ್ರಹಾರದ ನಿವಾಸಿಯಾದ ವಾಣಿ ಶ್ರೀ ಪೋನ್ ಪೇ ಮೂಲಕ 50,000 ರೂ, ವಿಜಯನಗರದ ಬೋಪಯ್ಯ ಆನ್ಲೈನ್ ಬ್ಯಾಂಕಿಂಗ್ ಮೂಲಕ 30,000 ರೂ, ಕುವೆಂಪುನಗರದ ನಿವಾಸಿ ವಿನೋದ ಬಾಯಿ ಆನ್ಲೈನ್ ಬ್ಯಾಂಕಿಂಗ್ ಮೂಲಕ 1,00,000 ರೂ, ಮೇಟಗಳ್ಳಿ ನಿವಾಸಿಯಾದ ಡಾ.ರಾಜೇಶ್ವರಿ ಎಂಬವರಿಗೆ ಕೆವೈಸಿ ಆಪ್ಡೇಟ್ ಎಂದು ಹೇಳಿ 1,00,000 ರೂ ವಂಚಿಸಲಾಗಿತ್ತು.
ಈ ಬಗ್ಗೆ ಮೈಸೂರಿನ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, 5 ಪ್ರತ್ಯೇಕ ಪ್ರಕರಣಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದ್ದ ಒಟ್ಟು 4,73,056 ರೂ ಹಣವನ್ನು ಸೆನ್ ಕ್ರೈಂ ಪೊಲೀಸ್ ಠಾಣೆಯ ಕ್ವಿಕ್ ರೆಸ್ಪಾಂನ್ಸ್ ಟೀಮ್ನ ಸಿಬ್ಬಂದಿಗಳು, ತ್ವರಿತವಾಗಿ ಕ್ರಮ ಕೈಗೊಂಡು ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್, ನೋಡಲ್ ಆಫೀಸರ್, ಮತ್ತು ಕೋರ್ ಬ್ಯಾಂಕಿಂಗ್ ನ ಲೀಗಲ್ ಟೀಮ್ ರವರನ್ನು ಸಂಪರ್ಕಿಸಿ ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿ, ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಹಣ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.
ಈ ಕಾರ್ಯವನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ, ಮಾರ್ಗದರ್ಶನದಲ್ಲಿ ಮೈಸೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್.ಎನ್, ಪಿ.ಎಸ್.ಐ.ಗಳಾದ ಅನಿಲ್ಕುಮಾರ್, ಸಿದ್ದೇಶ್ ಎಂ.ಎಲ್. ಮತ್ತು ಸಿಬ್ಬಂದಿಗಳು ಮಾಡಿದ್ದಾರೆ.