Tuesday, May 30, 2023

Latest Posts

SHOCKING NEWS | ಸೊಳ್ಳೆ ಬತ್ತಿಯಿಂದ ಹೊತ್ತಿದ ಬೆಂಕಿ, ಮಗು ಸೇರಿ ಆರು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನ ಮನೆಯೊಂದರಲ್ಲಿ ಸೊಳ್ಳೆ ಬತ್ತಿ ಬಿದ್ದು ಅದರಿಂದ ಬೆಂಕಿ ಹೊತ್ತಿದ್ದು, ಉಸಿರುಗಟ್ಟಿ ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.

ಕಾರ್ಬನ್ ಮೊನೊಕ್ಸೈಡ್‌ನಿಂದ ಉಸಿರಾಡಲು ಕಷ್ಟವಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಸೊಳ್ಳೆ ನಿವಾರಕ ಸುಡುವುದರಿಂದ ಉಂಟಾದ ಬೆಂಕಿಯಿಂದ ಮಗು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ. ಇನ್ನಿಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಸಂಧ್ಯಾ ಸ್ವಾಮಿ ಹೇಳಿದ್ದಾರೆ.

ಸೊಳ್ಳೆ ಓಡಿಸಲು ಬತ್ತಿ ಹಚ್ಚಿದ್ದು, ಮಧ್ಯರಾತ್ರಿ ಬತ್ತಿ ಉರುಳಿ ಹಾಸಿಗೆ ಮೇಲೆ ಬಿದ್ದಿದೆ. ವಿಷಕಾರಿ ಹೊಗೆಯಿಂದಾಗಿ ಮನೆಯಲ್ಲಿದ್ದವರೆಲ್ಲ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!