ವೈಎಸ್‌ಆರ್‌ಕಾಂಗ್ರೆಸ್‌ ನ ಆಜೀವ ಅಧ್ಯಕ್ಷರಾಗಿ ಜಗನ್‌ಮೋಹನ್‌ ರೆಡ್ಡಿ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಯುವಜನ ಶ್ರಮಿಕ ರೈತ ಕಾಂಗ್ರೆಸ್ (YSRC) ಪಕ್ಷದ ಆಜೀವ ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ. ಅಮರಾವತಿಯಲ್ಲಿ ನಡೆದ ಪಕ್ಷದ ವಿಶೇಷ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಈ ಕುರಿತು ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದ್ದು ಜಗನ್‌ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಆಂಧ್ರ ಪ್ರದೇಶದ ಮುಖಯಮಂತ್ರಿಯಾಘಿರುವ ಜಗನ್‌ ಮೋಹನ್‌ ರೆಡ್ಡಿ ಅವರು ಹಿಂದಿನ ಪಕ್ಷ ಕಾಂಗ್ರೆಸ್‌ ಅನ್ನು ತೊರೆದು 2011 ರಲ್ಲಿ ವೈಎಸ್‌ಆರ್‌ಸಿ ಸ್ಥಾಪಿಸಿದರು. ಅಂದಿನಿಂದ ಅವರು ಪಕ್ಷದ ಅಧ್ಯಕ್ಷರಾಗಿ, ತಾಯಿ ವಿಜಯಮ್ಮ ಗೌರವಾಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಅವರನ್ನು ಜೀವಿತಾವಧಿ ಅಧ್ಯಕ್ಷರನ್ನಾಗಿಸಲು ಭಾರತದ ಚುನಾವಣಾ ಆಯೋಗದ ಅನುಮೋದನೆಯನ್ನು ಪಡೆಯಬೇಕಾಗಿದ್ದು ಈ ಕುರಿತು ಪಕ್ಷವು ಭಾರತದ ಚುನಾವಣಾ ಆಯೋಗದ ಒಪ್ಪಿಗೆಯನ್ನು ಸದ್ಯದಲ್ಲೇ ಪಡೆಯಲಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!