ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದ ಕೆಲವೊಂದು ಪ್ರಾಂತ್ಯದಲ್ಲಿ ʼಕೆಲʼ ಸಮುದಾಯ ಬಹುಸಂಖ್ಯಾತರಾದರೆ ಅಲ್ಲಿ ಏನೆಲ್ಲಾ ಸಂಭವಿಸಬಹುದು, ದೇಶದ ಕಾನೂನು – ಕಾಯ್ದೆಗಳಿಗೆ ಯಾವ ಮಟ್ಟಿನ ʼಮನ್ನಣೆʼ ಸಿಗಬಹುದು ಎಂಬುದಕ್ಕೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಜಾರ್ಖಂಡ್ನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಮ್ತಾರಾ ಜಿಲ್ಲೆಯ ಕರ್ಮತಾಂಡ್, ನಾರಾಯಣಪುರ ಮತ್ತು ಜಮ್ತಾರಾ ಬ್ಲಾಕ್ಗಳ 33 ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಭಾನುವಾರದ ಬದಲು ಶುಕ್ರವಾರದಂದು ರಜೆ ಘೋಷಿಸಲಾಗಿದೆ ಎಂದು ಹಿಂದುಸ್ತಾನ್ ಪತ್ರಿಕೆ ವರದಿ ಮಾಡಿದೆ.
ಈ ಜಿಲ್ಲೆಯ ಶಾಲೆಗಳಲ್ಲಿನ ಬಹುತೇಕ ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬುದೇ ಇವು ಸರ್ಕಾರಿ ಶಾಲೆಗಳಾಗಿದ್ದರೂ ಉರ್ದು ಮಾದರಿಯ ಶಾಲೆಗಳಾಗಿ ಪರಿವರ್ತಿತವಾಗಿರುವುದಕ್ಕೆ ಕಾರಣ. ಈ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದ ವಿವರಗಳು ಸಹ, ಶುಕ್ರವಾರವನ್ನು ರಜೆ ಎಂಬುದಾಗಿ ತೋರಿಸುತ್ತಿವೆ.
ಶಾಲೆಗಳಲ್ಲಿನ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯನ್ನು ನೆಪವಾಗಿರಿಸಿಕೊಂಡು ಸರ್ಕಾರಿ ರಜೆಯನ್ನೇ ಬದಲಿಸಲಾಗಿದೆ, ಜೊತೆಗೆ ಇಲ್ಲಿನ ಸರ್ಕಾರಿ ಶಾಲೆಗಳನ್ನು ಉರ್ದು ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿಆಗಿರುವ ಈ ಮಾರ್ಪಾಡುಗಳ ಬಗ್ಗೆ ಪ್ರತಿ ಬ್ಲಾಕ್ನಿಂದ ವರದಿ ಕೇಳಿದ್ದೇನೆ ಎಂದು ಜಿಲ್ಲಾ ಶಿಕ್ಷಣ ಅಧೀಕ್ಷಕ ಸಂಜಯ್ ಕುಮಾರ್ ದಾಸ್ ಹೇಳಿದ್ದಾರೆ. ಯಾವ ಮಾನದಂಡದ ಮೇಲೆ ಶುಕ್ರವಾರ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂಬುದರ ಬಗ್ಗೆ ವರದಿ ಕೇಳಲಾಗಿದೆ. ವರದಿ ಬಂದ ನಂತರ ನಾನೇ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಸಂಜಯ್ ಕುಮಾರ್ ದಾಸ್ ಹೇಳಿದ್ದಾರೆ.
ಡುಮ್ಕಾ ಸಂಸದರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು, ಈ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಮುಸ್ಲಿಂ ಪ್ರಾಬಲ್ಯದ ಶಾಲೆಗಳಿಗೆ ಶುಕ್ರವಾರದಂದು ವಾರಾಂತ್ಯದ ರಜೆಯನ್ನು ನೀಡಲಾಗುತ್ತದೆ ಹಾಗೂ ಸಾಮಾನ್ಯ ಹಿಂದಿ ಶಾಲೆಗಳನ್ನು ಉರ್ದು ಶಾಲೆಗಳಾಗಿ ಪರಿವರ್ತಿಸುವ ಸಂಚು ನಡೆದಿದೆ ಎಂದು ದೂರಿದ್ದರು.
ರಾಜ್ಯ ಶಿಕ್ಷಣ ಸಚಿವ ಜಗರ್ನಾಥ್ ಮಹ್ತೋ ಅವರು ಈ ಬಗ್ಗೆ ಅಧಿಕಾರಿಗಳು ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ