ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಡೆದ ಸರ್ಕಾರು ವಾರಿ ಪಾಟ ಮೂವಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವರದಿಗಾರರೊಬ್ಬರು ಮಹೇಶ್ ಬಾಬು ಅವರನ್ನು ಬಾಲಿವುಡ್ಗೆ ಯಾವಾಗ ಕಾಲಿಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರಿನ್ಸ್, ಬಾಲಿವುಡ್ ನನ್ನನ್ನು ಭರಿಸಲು ಆಗುವುದಿಲ್ಲ. ಅಲ್ಲಿಗೆ ಹೋಗಿ ನಾನು ನನ್ನ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ ಎಂಬ ಮಾತುಗಳನ್ನು ಹೇಳಿದ್ರು. ಮಹೇಶ್ ಬಾಬು ಈ ಹೇಳಿಕೆಗಳನ್ನು ಕೆಲವರು ತಪ್ಪಾಗಿ ಬಿಂಬಿಸಿದ್ದರಿಂದ ವಿವಾದ ಭುಗಿಲೆದ್ದಿದೆ. ಈ ಕಮೆಂಟ್ಗಳಿಗೆ ಕೆಲವರು ಮಹೇಶ್ ಅವರನ್ನು ಟೀಕೆ ಮಾಡಿದ್ದರಿಂದ ಮತ್ತೊಂದು ಸಂದರ್ಶನದಲ್ಲಿ ಮಹೇಶ್ ಬಾಬು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ತೆಲುಗು ಚಲನಚಿತ್ರಗಳು ಎಲ್ಲಡೆ ರಿಲೀಸ್ ಆಗುತ್ತಿವೆ. ರಾಜಮೌಳಿ ನಿರ್ದೇಶನದ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಇವು ಬಾಲಿವುಡ್ ನಲ್ಲೂ ಬಿಡುಗಡೆಯಾಗಲಿದೆ. ನನಗೆ ಎಲ್ಲ ಭಾಷೆಗಳ ಬಗ್ಗೆ ಗೌರವವಿದೆ. ಆದರೆ ನಾನು ಟಾಲಿವುಡ್ನಲ್ಲಿ ಆರಾಮವಾಗಿದ್ದೇನೆ. ಹಾಗಾಗಿ ಬಾಲಿವುಡ್ ಪ್ರವೇಶದ ಬಗ್ಗೆ ಪ್ರಶ್ನೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹೇಶ್ ಅವರ ಕಮೆಂಟ್ಗಳಿಗೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ರಣಾವತ್ ಮಹೇಶ್ ಅವರನ್ನು ಬೆಂಬಲಿಸಿ ಮಹೇಶ್ ಹೇಳಿದ್ದು ನಿಜ ಎಂದು ಹೇಳಿದ್ದಾರೆ.
ಮಹೇಶ್ ಹೇಳಿರುವುದು ನಿಜವಿರಬಹುದು. ನಾನು ಅವರ ಅಭಿಪ್ರಾಯವನ್ನು ಒಪ್ಪುತ್ತೇನೆ. ಅವರಿಗೆ ಅನೇಕ ಚಿತ್ರ ನಿರ್ಮಾಪಕರಿಂದ ಆಫರ್ಗಳು ಬರುತ್ತವೆ. ಏಕೆಂದರೆ ಅಲ್ಲಿನ ನಟರು ಮತ್ತು ನಿರ್ದೇಶಕರು ತೆಲುಗು ಚಿತ್ರರಂಗವನ್ನು ಭಾರತದ ನಂಬರ್ ಒನ್ ಚಿತ್ರೋದ್ಯಮವನ್ನಾಗಿ ಮಾಡಿದ್ದಾರೆ. ಹಾಗಾಗಿ ಬಾಲಿವುಡ್ ಅವರನ್ನು ಸಹಿಸಲಾಗಲಿಲ್ಲ. ಅವರು ತಮ್ಮ ಪರಿಶ್ರಮಕ್ಕೆ ಗೌರವವನ್ನು ತೋರಿಸಿದ್ದಾರೆ ಅದು ತಪ್ಪಲ್ಲ. ಈ ಹಿಂದೆ ನಾವು(ಬಾಲಿವುಡ್) ತೆಲುಗು ಚಿತ್ರರಂಗದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಅದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ತುಂಬಾ ಕಷ್ಟಪಟ್ಟು ಬೆಳೆದು ಬಂದಿದ್ದಾರೆ. ತೆಲುಗು ಸಿನಿ ಇಂಡಸ್ಟ್ರಿ ನೋಡಿ ನಾವು ಕಲಿಯುವುದು ಬಹಳಷ್ಟಿದೆ ಎಂದಿದ್ದಾರೆ.