ದೇವಾಲಯದ ಮೇಲೆ ಕನ್ನ: ಆಭರಣ, ಹಣ ದೋಚಿದ ಖದೀಮರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಡು ಹಗಲೇ ದೇವಾಲಯಗಳ ಆಭರಣ ಮತ್ತು ಹುಂಡಿ ಹಣವನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಹೆಗ್ಗಾರ ಗ್ರಾಮದ ಪ್ರಸಿದ್ಧ ಮಹಾಗಣಪತಿ ದೇವಾಲಯ ಮತ್ತು ಶೇವಕಾರದ ಈಶ್ವರ ದೇವಾಲಯದಲ್ಲಿ ಕಳ್ಳತನದ ಕೃತ್ಯ ನಡೆದಿದ್ದು ನೀಲಿ ಬಣ್ಣದ ಕಾರಿನಲ್ಲಿ ಬಂದು ಹೆಗ್ಗಾರದ ಮಹಾಗಣಪತಿ ದೇವಾಲಯಕ್ಕೆ ನುಗ್ಗಿ ದೇವರ ಪ್ರಭಾವಳಿ, ಕವಚ, ದೊಡ್ಡ ಗಂಟೆ ಸೇರಿದಂತೆ ವಿವಿಧ ಆಭರಣ ಮತ್ತು ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದು ಕಾಣಿಕೆ ಡಬ್ಬಿ ಒಡೆದು ಸಾವಿರಾರು ರೂಪಾಯಿ ಹಣ ಕದ್ದೊಯ್ದಿದ್ದಾರೆ.
ಶೆವಕಾರದ ಈಶ್ವರ ದೇವಾಲಯದಲ್ಲಿ ಸಹ ಕಳ್ಳತನ ನಡೆದಿರುವುದಾಗಿ ತಿಳಿದು ಬಂದಿದ್ದು ಎಷ್ಟು ಮೌಲ್ಯದ ವಸ್ತುಗಳು ಮತ್ತು ಹಣ ಕಳ್ಳತನ ಮಾಡಲಾಗಿದೆ ಎಂಬ ನಿಖರ ಮಾಹಿತಿ ಲಭ್ಯವಾಗಬೇಕಿದೆ.
ನೀಲಿ ಬಣ್ಣದ ಕಾರೊಂದು ಈ ಭಾಗಕ್ಕೆ ಬಂದು ಹೋಗಿರುವ ಕುರಿತು ಮಾತುಗಳು ಕೇಳಿ ಬರುತ್ತಿದ್ದು ಈ ದೃಶ್ಯಗಳು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!