Thursday, March 23, 2023

Latest Posts

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿ: 7ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕ ಸರ್ಕಾರ ಗುರುವಾರ ರಾತ್ರಿ ಏಳು ಉನ್ನತ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಮಂಗಳೂರು ನಗರದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ರೈಲ್ವೆ ಉಪ ಪೊಲೀಸ್ ಮಹಾನಿರೀಕ್ಷಕರಾಗಿ ವರ್ಗಾವಣೆ. ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿಲಾಗಿದೆ.

ಕುಲದೀಪ್ ಕುಮಾರ್ ಆರ್ ಜೈನ್-2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ವರ್ಗಾವಣೆ.

ಡೆಕ್ಕ ಕಿಶೋರ್ ಬಾಬು- 2013 ರ ಬ್ಯಾಚ್ ಐಪಿಎಸ್, ಸೂಪರಿಂಟೆಂಡೆಂಟ್‌ ಇಂಟೆಲಿಜೆನ್ಸ್ ಬ್ಯೂರೋಗೆ ವರ್ಗಾವಣೆ.

ಕೋನ ವಂಶಿ ಕೃಷ್ಣ- 2014 ರ ಬ್ಯಾಚ್ ಐಪಿಎಸ್, ಪೊಲೀಸ್‌ ಸೂಪರಿಂಟೆಂಡೆಂಟ್‌, ವೈರ್‌ಲೆಸ್‌, ಬೆಂಗಳೂರು

ಮೊಹಮ್ಮದ್ ಸುಜೀತಾ ಎಂಎಸ್- 2014-ನೇ ಬ್ಯಾಚ್ ಐಪಿಎಸ್ ಅಧಿಕಾರಿಯನ್ನು ಬೆಂಗಳೂರು ನಗರ ಸಂಚಾರ ದಕ್ಷಿಣದ ಉಪ ಪೊಲೀಸ್ ಆಯುಕ್ತರಾಗಿ ನಿಯೋಜಿಸಲಾಗಿದೆ.

ಅರುಣಾಂಗ್ಶು ಗಿರಿ- 2015 ರ ಬ್ಯಾಚ್ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಸಿಟಿ ಆರ್ಮ್ಡ್ ರಿಸರ್ವ್ ಹೆಡ್ಕ್ವಾರ್ಟರ್ಸ್, ಬೆಂಗಳೂರು ನಗರ.

ಯಶೋಧ ವಂಟಗೋಡಿ- 2015 ರ ಬ್ಯಾಚ್ ಐಪಿಎಸ್ ಅಧಿಕಾರಿ, ಕೊಪ್ಪಳ ಜಿಲ್ಲೆಯ ಪೊಲೀಸ್ ಅಧೀಕ್ಷಕರಾಗಿ ವರ್ಗಾವಣೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!