ಸಂಭ್ರಮದಿಂದ ನಡೆಯಿತು ಕಾರ್ತಿಕ ವನಭೋಜನ ಕಾರ್ಯಕ್ರಮ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನ ಕನ್ನಡ ವೈಶ್ಯ ಸಮಾಜದವರ ಕಾರ್ತಿಕ ವನಭೋಜನ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯಿತು.
ಕಾಕರಮಠದ ಶ್ರೀ ವಿಠ್ಠಲ ಸದಾಶಿವ ದೇವರ ಪಲ್ಲಕಿ ಉತ್ಸವ ಮೆರವಣಿಗೆ ಬಾಳೇಗುಳಿಯ ವನಪ್ರದೇಶಕ್ಕೆ ತೆರಳಿ ಅಲ್ಲಿ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಯಿತು.
ಮದ್ಯಾಹ್ನ ಶ್ರೀ ದೇವರ ವಿಶೇಷ ಪೂಜೆ, ಸವಾಲು ಕಾರ್ಯಕ್ರಮ ನಂತರ ನಡೆದ ವನಭೋಜನದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ಶ್ರೀದೇವರ ಉತ್ಸವ ಮೂರ್ತಿಯನ್ನು ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಎದುರು ಪಲ್ಲಕಿಯಿಂದ ರಥದಲ್ಲಿ ವಿರಾಜಮಾನಗೊಳಿಸಿ ಪಟ್ಟಣದಲ್ಲಿ ಮೆರವಣಿಗೆ ದೀಪೋತ್ಸವದ ಮೂಲಕ ಕಾಕರಮಠದಲ್ಲಿರುವ ದೇವಾಲಯಕ್ಕೆ ಬಂದು ವಿಶೇಷ ಪೂಜಾ ಕಾರ್ಯಕ್ರಮ ನಡೆಸಲಾಯಿತು.
ದೇವಾಲಯದ ಆವಾರದಲ್ಲಿ ಭಕ್ತ ಜನರು ಅತ್ಯಾಕರ್ಷಕ ರಂಗೋಲಿ ರಚಿಸುವ ಮೂಲಕ ಗಮನ ಸೆಳೆದರು.
ಅಂಕೋಲಾ ತಾಲೂಕಿನ ವೈಶ್ಯ ಸಮಾಜದ ಮುಖಂಡರು, ವೈಶ್ಯ ಯುವಜನ ಸಾಂಸ್ಕೃತಿಕ ಸಂಘ, ಶಾರದಾಂಬಾ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!