ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಸಾಂಪ್ರದಾಯಿಕ ಕಾರ್ತಿಕ ವನಭೋಜನ ಮಹೋತ್ಸವದ 5 ದೇವರುಗಳ ಪಲ್ಲಕಿಗಳ ಮೆರವಣಿಗೆಯೊಂದಿಗೆ ಅತ್ಯಂತ ಸಂಭ್ರಮದಿಂದ ನಡೆಯಿತು.
ತಾಲೂಕಿನ ದೊಡ್ಡ ದೇವರು ಎಂದು ಕರೆಯಲ್ಪಡುವ ಶ್ರೀವೆಂಕಟರಮಣ, ಶಕ್ತಿದೇವತೆ ಶ್ರೀ ಶಾಂತಾದುರ್ಗಾ,
ಶ್ರೀಆರ್ಯಾದುರ್ಗಾ,ಅಂಬಾರಕೊಡ್ಲದ ಶ್ರೀನಾರಾಯಣ, ಹೊನ್ನಿಕೇರಿಯ ಶ್ರೀಮಹಾದೇವ ಹೀಗೆ ಪಂಚದೇವರುಗಳ ಪಲ್ಲಕಿ ಮೆರವಣಿಗೆ ಅಂಬಾರಕೊಡ್ಲ ಮಾರ್ಗದ ಮೂಲಕ ಬಾಳೇಗುಳಿ ಬಳಿ ಇರುವ ವನ ಪ್ರದೇಶಕ್ಕೆ ತೆರಳಿ ಅಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವನಭೋಜನ ಕಾರ್ಯಕ್ರಮ ನಡೆಸಲಾಯಿತು.
ನೂರಾರು ಜನ ಭಕ್ತರು ಆಗಮಿಸಿ ಶ್ರೀ ದೇವರ ವನಭೋಜನ ಪ್ರಸಾದ ಸ್ವೀಕರಿಸಿದರು.
ಅಂಬಾರಕೊಡ್ಲದಿಂದ ಶಿರಕುಳಿ ವರೆಗೆ ವಿವಿಧ ಬಗೆಯ ಆಕರ್ಷಕ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.