ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಾರಾಣಸಿಯ ಕಾಶಿಯಲ್ಲಿವಿಶೇಷ ‘ಕಾಶಿ ತಮಿಳು ಸಂಗಮಂ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಮೋದಿ, ‘ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತವು ವಿಭಿನ್ನ, ವಿಶೇಷ ನಂಟು, ಬೆಸುಗೆ ಹೊಂದಿವೆ. ಕಾಶಿ ಹಾಗೂ ತಮಿಳುನಾಡು ಶಿವಮಯವಾಗಿವೆ, ಶಕ್ತಿಮಯವಾಗಿವೆ. ಕಾಶಿ ಅಭಿವೃದ್ಧಿಗೆ ತಮಿಳುನಾಡಿನ ಕೊಡುಗೆ ಅಪಾರವಾಗಿದೆ. ಬನಾರಸ್ ಹಿಂದು ವಿವಿ ಕುಲಪತಿಯಾಗಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಹಲವು ಬದಲಾವಣೆಗೆ ಸಾಕ್ಷಿಯಾಗಿದ್ದಾರೆ ಎಂದು ಸ್ಮರಿಸಿದರು.
ನವೆಂಬರ್ 19ರಿಂದ 30 ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಹಾಗೂ ಉತ್ತರ ಭಾರತದ ಬೆಸುಗೆ ಕುರಿತು ಅಧ್ಯಯನ, ಚಿಂತನ ಮಂಥನ ನಡೆಸುವ ವಿಶೇಷ ಕಾರ್ಯಕ್ರಮವೇ ಕಾಶಿ ತಮಿಳು ಸಂಗಮಂ ಆಗಿದೆ.
ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಾಗರಿಕತೆ, ಸಾಹಿತಿ, ಸಂಸ್ಕೃತಿ, ಜ್ಞಾನಸಂಪತ್ತು ಸೇರಿ ಹತ್ತಾರು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.