ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಉಷ್ಣ ಅಲೆ ಜೀವ ಬಲಿ ಪಡೆದಿದೆ.
ಪಾಲಕ್ಕಾಡ್ ಜಿಲ್ಲೆಯ ಎಡಪ್ಪುಳ್ಳಿ ಗ್ರಾಮದ ನಿವಾಸಿ 90 ವರ್ಷ ವಯಸ್ಸಿನ ವೃದ್ಧೆಯೋರ್ವರು ಉಷ್ಣ ಅಲೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಒಂದಿಷ್ಟು ಬುದ್ಧಿಮಾಂದ್ಯ ಕಾಡುತ್ತಿದ್ದ ಈ ಹಿರಿಯೆ ಮನೆಯಿಂದ ಹೊರಗೆ ಬಂದ ವೇಳೆ ಬಿಸಿಲ ಆಘಾತ ತಟ್ಟಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದ ಮೇಲೆ ಸುಟ್ಟ ಗಾಯಗಳು ಕಂಡುಬಂದಿದ್ದು, ಇದು ಬಿಸಿಲಿನ ಆಘಾತದಿಂದಲೇ ಸಂಭವಿಸಿದ ಸಾವು ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಬಿಸಿಲಿ ಝಳಕ್ಕೆ ಕೇರಳ ಕಾದ ಕಬ್ಬಿಣ ದಂತಾಗಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದ 12 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆಯು ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ