ಹೊಸದಿಗಂತ ಜಿಜಿಟಲ್ ಡೆಸ್ಕ್:
ಉಪ್ಪಿನಂಗಡಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪ್ರಧಾನ ಅರ್ಚಕರಾಗಿ ಜನಾನುರಾಗಿಯಾಗಿದ್ದ ವೇದಮೂರ್ತಿ ಕೇಶವ ಜೋಗಿತ್ತಾಯ (86) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಮಚ್ಚಿನದ ಅವರ ಸ್ವಗೃಹದಲ್ಲಿ ಮಂಗಳವಾರ ರಾತ್ರಿ ನಿಧನರಾದರು.
ಸುದೀರ್ಘ ಕಾಲ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಭಕ್ತಾದಿಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದ ಇವರು ವೃತ್ತಿ ಕ್ಷೇತ್ರದಿಂದ ನಿವೃತ್ತರಾದ ಬಳಿಕ ಭಕ್ತಾದಿಗಳ ಆಶಯದಂತೆ ಪೂಜಾ ಕೈಂಕರ್ಯವನ್ನು ನಡೆಸಿಕೊಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅನರೋಗ್ಯಕ್ಕೀಡಾಗಿ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು.
ಮೃತರು ಪತ್ನಿ, ಇಬ್ಬರು ಗಂಡು, ಒರ್ವ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.