ಬೆಂಗಳೂರಿಗೆ ತೆರಳಿದ ಯುವತಿಯ ಅಪಹರಣ: ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮನೆಯಿಂದ ಬೆಂಗಳೂರಿಗೆ ಹೋಮ್ ನರ್ಸಿಂಗ್ ಕೆಲಸಕ್ಕೆಂದು ತೆರಳಿದ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಯುವತಿಯ ತಂದೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ತಾಲೂಕಿನ ರಾಮನಗುಳಿ, ಹಳವಳ್ಳಿಯ ಮಳಲಗಾಂವನ 17 ವರ್ಷ 10 ತಿಂಗಳು ವಯಸ್ಸಿನ ಯುವತಿ ಬೆಂಗಳೂರಿಗೆ ಹೋಮ್ ನರ್ಸಿಂಗ್ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಸೆಪ್ಟೆಂಬರ್ 2 ರಂದು ಯಲ್ಲಾಪುರ ಬಸ್ ಹತ್ತಿ ತೆರಳಿದ್ದು ಸ್ವಲ್ಪ ದಿನಗಳ ನಂತರ ಅವಳ ಮೊಬೈಲ್ ಸಂಖ್ಯೆಗೆ ಪೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದ್ದು ಅವಳ ಗೆಳತಿಯರಲ್ಲಿ ಮತ್ತು ಸಂಬಂಧಿಗಳಲ್ಲಿ ವಿಚಾರಣೆ ನಡೆಸಿದರೆ ಅವಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತಂತೆ ಯುವತಿಯ ತಂದೆ ಹಳವಳ್ಳಿ ಮಳಲಗಾಂವ ನಿವಾಸಿ ಗಣಪತಿ ಅನಂತ ಸಿದ್ಧಿ ದೂರು ದಾಖಲಿಸಿ ತಮ್ಮ ಮಗಳನ್ನು ಅಪಹರಣ ಮಾಡಲಾಗಿದ್ದು ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!