ಆರ್ಥಿಕ ಸಂಕಷ್ಟದಲ್ಲಿ ಕೆಎಸ್ಸಾರ್ಟಿಸಿ: ಡೀಸೆಲ್ ಕೊರತೆಗೆ ಹಲವು ಬಸ್ ಸೇವೆ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ಜಿಲ್ಲೆಯ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
ಡೀಸೆಲ್ ಕೊರತೆ ಸರಿದೂಗಿಸಲು ಆದಾಯ ಕಡಿಮೆ ಇರುವ, ಕಡಿಮೆ ದೂರದ ಬಸ್ ಸೇವೆ ರದ್ದುಗೊಳಿಸಲು ನಿರ್ಧರಿಸಲಾಗಿರುವ ಬೆನ್ನಿಗೇ ಕಾಸರಗೋಡು ಕಾಞಂಗಾಡ್ ಡಿಪೊಗಳಲ್ಲಿ ಸುಮಾರು ೫೦ ಬಸ್ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ. ಮೂಲಗಳ ಮಾಹಿತಿ ಪ್ರಕಾರ ೬೭ ಸೇವೆಗಳ ಪೈಕಿ ೪೦ ಬಸ್‌ಗಳು ಮಾತ್ರ ಕಾರ್ಯನಿರ್ವಹಿಸಿವೆ.
ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕೆಎಸ್ಸಾರ್ಟಿಸಿ, ನೌಕರರಿಗೆ ವೇತನ ನೀಡಲು ಕೂಡ ಹಣವಿಲ್ಲದ ಸ್ಥಿತಿಯಲ್ಲಿದೆ.
ಈ ನಡುವೆ ಸದ್ಯದ ಬಿಕ್ಕಟ್ಟಿಗೆ ಸಾರಿಗೆ ಸಚಿವರೇ ಹೊಣೆ ಎಂದು ಎಐಟಿಯುಸಿ ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!