ಲಖಿಂಪುರ ಖೇರಿ ಭೀಕರ ಅಪಘಾತ : ಸಂತ್ರಸ್ತರನ್ನು ನೋಡಿ ಕಣ್ಣೀರಿಟ್ಟ ಐಎಎಸ್ ಅಧಿಕಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಬಸ್ ಹಾಗೂ ಮಿನಿ ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದರು.

ಬುಧವಾರ ಸಂಭವಿಸಿದ ಈ ಅಪಘಾತದಲ್ಲಿ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳನ್ನು ನೋಡಲು ಐಎಎಸ್ ಅಧಿಕಾರಿ ಡಾ. ರೋಶನ್ ಜಾಕೋಬ್ ಬಂದಿದ್ದು, ಅವರ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಮಗು ಕೂಡ ಗಾಯಗೊಂಡಿದ್ದು, ಅವರ ತಾಯಿ ಬಳಿ ಬಂದು ಸಮಾಧಾನ ಮಾಡಿದ್ದಾರೆ, ಆದರೆ ಮಗುವನ್ನು ನೋಡಿದ ತಕ್ಷಣ ಕಣ್ಣೀರು ತಡೆಯಲಾಗದೆ ಗಳಗಳನೆ ಅತ್ತಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!