ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಅರಮನೆ ಆವರಣದಲ್ಲಿ ಇದೀಗ ಸಂಭ್ರಮ ಹೆಚ್ಚಾಗಿದೆ.
ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಶಿಬಿರದಿಂದ ಬಂದ ಲಕ್ಷ್ಮಿ ಆನೆ ತಡರಾತ್ರಿ ಗಂಡು ಮರಿಗೆ ಜನ್ಮ ನೀಡಿದೆ.
ಇದೀಗ ಗಜಪಡೆಯಿಂದ ಆನೆಯನ್ನು ಪ್ರತ್ಯೇಕ ಮಾಡಿದ್ದು, ಆವರಣದಲ್ಲಿಯೇ ನಿರ್ಬಂಧಿತ ಜಾಗದಲ್ಲಿ ಬಿಡಾರ ಹಾಕಲಾಗಿದೆ. ಲಕ್ಷ್ಮಿ ಹಾಗೂ ಮರಿ ಆನೆ ಸುರಕ್ಷಿತವಾಗಿದ್ದು, ಆರೋಗ್ಯವಾಗಿವೆ.