ಬೇರೆ ಪಕ್ಷದ ನಾಯಕರು ಶತ್ರುಗಳಲ್ಲ, ಹಿತಶತ್ರುಗಳಷ್ಟೇ: ಸಚಿವ ಸತೀಶ ಜಾರಕಿಹೊಳಿ

ಹೊಸದಿಗಂತ ವರದಿ ಹುಬ್ಬಳ್ಳಿ:

ರಾಜಕಾರಣದಲ್ಲಿ ಪಕ್ಷದಿಂದ ಪಕ್ಷ ಹೋಗುವುದು, ಬೇರೆ ಪಕ್ಷದವರ ಭೇಟಿ ಹಾಗೂ ಅವರೊಂದಿಗೆ ಚರ್ಚೆ ನಡೆಸುವುದು ಸಾಮಾನ್ಯ. ಎಲ್ಲ ಪಕ್ಷದ ನಾಯಕರು ಹಿತೈಷಿಗಳೇ ಹೊರತು ಶತ್ರುಗಳಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕರ ಸಂಬಂಧ ಸರಿ ಇರುವುದರಿಂದ ಒಬ್ಬರನ್ನೊಬ್ಬರು ಭೇಟಿಯಾಗಿರುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎರಡು ತಾಸು ಏಕೆ ಇಡೀ ರಾತ್ರಿನೇ ಅವರು ಚರ್ಚಿಸಿರಬಹುದು ಎಂದರು.

ಗೆಳೆತನ ಇದ್ದೆ ಇರುತ್ತದೆ. ಗೋವಾ ಮತ್ತು ಕರ್ನಾಟಕಕ್ಕೆ ಮೊದಲಿಂದಲೂ ಸ್ನೇಹವಿದೆ. ಗೆಳೆತನದಿಂದಾಗಿ ಒಬ್ಬರಿಗೊಬ್ಬರು ಭೇಟಿಯಾಗಿರುತ್ತಾರೆ. ರಾಜ್ಯದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಸ್ನೇಹಿತರಿದ್ದಾರೆ. ಆ ಪಕ್ಷದವರು ನಮ್ಮನ್ನು ಭೇಟಿಯಾಗುತ್ತಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!