ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೀಲಾವತಿ ಅವರದ್ದು ತುಂಬು ಜೀವನ, ಅವರ ಕಲೆಗೆ ಈಗಾಗಲೇ ರಾಷ್ಟ್ರಪ್ರಶಸ್ತಿ ಬಂದಿರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಲೀಲಾವತಿ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಸಿಎಂ ಮಾತನಾಡಿದ್ದಾರೆ.
ಕರ್ನಾಟಕ ಫಿಲಂ ಇಂಡಸ್ಟ್ರಿ ಕಂಡ ಅಪರೂಪದ ನೈಜ ನಟನೆಯ ಕಲಾವಿದೆ ಲೀಲಾವತಿ ಅವರು. ರಂಗಭೂಮಿ, ಸಿನಿಮಾಗಳಲ್ಲಿ ಅವರನ್ನು ಮೀರಿಸುವ ನಟನೆ ಇರಲಿಲ್ಲ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದೆ. ತಾಯಿಯನ್ನು ಚೆನ್ನಾಗಿ ನೋಡಿಕೋ ಎಂದು ವಿನೋದ್ಗೆ ಹೇಳಿದ್ದೆ. ಅವರಿಬ್ಬರ ಬಾಂಧವ್ಯ ಅತ್ಯದ್ಭುತವಾಗಿತ್ತು. ವಿನೋದ್ಗೆ ಈ ನೋವು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ.