ಹೊಸದಿಗಂತ ವರದಿ, ಶಿರಸಿ:
ಇಲ್ಲಿಯ ಕೆರೆಕೈ ಭಾಗದಲ್ಲಿ ಮತ್ತೆ ಚಿರತೆಯ ಆರ್ಭಟ ಕಂಡು ಬಂದಿದ್ದು ಜನ ಭೀತರಾಗಿದ್ದಾರೆ.
ಕೆರೆಕೈಯ ಮೆಣಸಿ ಕೇರಿ ಜಿತೇಂದ್ರ ಭಟ್ ರವರ ಮನೆ ಹತ್ತಿರ ಶುಕ್ರವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ. ನಾಯಿಗಳು ಒಂದೇ ಸಮನೆ ಬೊಗಳುತ್ತಿದ್ದುದರಿಂದ ಆತಂಕಗೊಂಡ ಜನ ಇಣಕಿ ನೋಡಿದಾಗ ಚಿರತೆಯ ಚಲನವಲನ ಕಾಣಿಸಿದೆ.
ಕೊಟ್ಟಿಗೆಯಲ್ಲಿರುವ ದನಕರು , ಸಾಕು ನಾಯಿಗಳನ್ನು ಗುರಿಯಾಗಿಸಿ ಚಿರತೆ ವಸತಿ ಪ್ರದೇಶಕ್ಕೆ ಬರುತ್ತಿದೆ.ಕಳೆದ ಕೆಲವು ದಿನಗಳಿಂದ ಕೆರೆಕೈ , ಪದ್ಮಬೈಲ್ ಸುತ್ತಮುತ್ತ ಕಾಣಿಸಿ ಕೊಳ್ಳುತ್ತಾ ಆತಂಕ ಮೂಡಿಸಿದೆ ಅರಣ್ಯ ಇಲಾಖೆ ತುರ್ತು ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.