ಕರ್ನಾಟಕ ಕಾಶ್ಮೀರ ಆಗದಿರಲಿ: ಶೋಭಾ ಕರಂದ್ಲಾಜೆ

ಹೊಸದಿಗಂತ ವರದಿ ವಿಜಯನಗರ:

ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಮೂಲಕ ಕರ್ನಾಟಕ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ ಆಗದಿರಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಹೊಸಪೇಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮಾಜದ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದ್ದು, ಕೆಜಿ ಹಳ್ಳಿ- ಕೆಜಿ ಹಳ್ಳಿ ಗಲಭೆ, ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ಹಳೆ ಹುಬ್ಬಳ್ಳಿಯ ಗಲಭೆಯಿಂದ ಕರ್ನಾಟಕ ಕಾಶ್ಮೀರ, ಕೇರಳ ಹಾಗೂ ಪಶ್ಚಿಮ ಬಂಗಾಳ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದರು.
ಸರ್ಕಾರದ ವ್ಯವಸ್ಥೆಯನ್ನೇ ಬಡಮೇಲು ಮಾಡುವಂತ ಸವಾಲು ಒಡ್ಡುತ್ತಿದ್ದಾರೆ. ಇವರನ್ನು ಬಂಧಿಸಿ, ಉಗ್ರ ಕ್ರಮಕೈಗೊಳ್ಳಬೇಕು. ಕರ್ನಾಟಕ ಶಾಂತಿ ಬಯಸುವ ನಾಡು. ಈ ನಾಡಲ್ಲಿ ಗಲಭೆ ಸೃಷ್ಟಿಸಿದರೆ ಸುಮ್ಮನೆ ಇರುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!