ಮಗಳು ಇನ್ನೂ ಸ್ವಲ್ಪ ದಿನ ಬದುಕಿರಲಿ, ಅಂಗಾಂಗ ದಾನ ಮಾಡಿದ ಪೋಷಕರ ಮಾತಿದು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಸ್‌ನಿಂದ ಕೆಳಕ್ಕೆ ಬಿದ್ದು ಮೆದುಳು ನಿಷ್ಕ್ರಿಯವಾದ ಮಗಳ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿ, ಸಾರ್ಥಕತೆ ಮೆರೆದಿದ್ದಾರೆ.
ಕಡೂರು ತಾಲೂಕಿನ ಸೋಮನಹಳ್ಳಿಯ ತಾಂಡಾದ ರಕ್ಷಿತಾ ಬಸ್‌ನಲ್ಲಿ ದಿನವೂ ಕಾಲೇಜಿಗೆ ಹೋಗಿ ಬರುತ್ತಿದ್ದಳು.
ಬಸ್‌ನಿಂದ ಕೆಳಗೆ ಬಿದ್ದು, ಗಂಭೀರವಾಗಿ ಆಕೆ ಗಾಯಗೊಂಡಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ವೈದ್ಯರು ಆಕೆ ಮೆದುಳು ನಿಷ್ಟ್ರಿಯವಾಗಿರುವುದರ ಬಗ್ಗೆ ಪೋಷಕರಿಗೆ ಮಾಹಿತಿ ನಿಡಿದ್ದಾರೆ.
ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿಗೆ ನೀಡಿದ್ದು, ಮಗಳು ಈ ರೀತಿಯಾದರೂ ಇನ್ನೂ ಹೆಚ್ಚು ದಿನ ಬದುಕಿರಲಿ ಎಂದಿದ್ದಾರೆ.
ಬಸ್ ನಿರ್ವಾಹಕರ ಅಜಾಗರೂಕತೆಯಿಂದ ಮಗಳು ಬಸ್‌ನಿಂದ ಕೆಳಕ್ಕೆ ಬಿದ್ದಿದ್ದಾಳೆ. ಇದರ ಬಗ್ಗೆ ಕ್ರಮವಹಿಸಿ, ಮಕ್ಕಳನ್ನು ಕಳೆದುಕೊಳ್ಳುವ ನೋವು ಪೋಷಕರಿಗೆ ಮಾತ್ರ ಗೊತ್ತು. ಬೇರೆ ಯಾವ ಹೆತ್ತವರೂ ಈ ರೀತಿ ಕಣ್ಣೀರು ಇಡದಿರಲಿ, ಜಾಗರೂಕರಾಗಿರಿ. ನಮ್ಮ ಮಗು ಸಾಯಬಾರದು, ಆಕೆ ಸದಾ ಬದುಕಿರಬೇಕು ಎಂದು ತಾಯಿ ಲಕ್ಷ್ಮಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!