ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜಾರಿಗೆ ಬಂದಾಗಿನಿಂದಲೂ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದೀಗ ಕಾಂಗ್ರೆಸ್ನಲ್ಲಿ ಒಳಗೊಳಗೆ ಮನಸ್ತಾಪಗಳು ಹೆಚ್ಚಾಗಿದ್ದು, ಸಚಿವರ ದುರ್ನಡತೆಯಿಂದ ಬೇಸತ್ತಿದ್ದೇವೆ ಎಂದು ಶಾಸಕರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಅವರಿಗೆ ಬುದ್ದಿ ಹೇಳಬೇಕು, ಕೂಡಲೇ ಶಾಸಕಾಂಗ ಸಭೆ ಕರೆಯಬೇಕು ಎನ್ನುವ ಪತ್ರ ಸಿಎಂಗೆ ತಲುಪಿದ್ದು, ಸಿಎಂ ಶಾಕ್ ಆಗಿದ್ದಾರೆ. ಶಾಸಕರ ಅಹವಾಲನ್ನು ಸಿದ್ದರಾಮಯ್ಯ ಸ್ವೀಕರಿಸಿದ್ದು, ಇದೇ ತಿಂಗಳ 27ರಂದು ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಖಾಸಗಿ ಹೊಟೇಲ್ ಒಂದರಲ್ಲಿ ಸಭೆ ನಡೆಯಲಿದೆ.