April 24, 2026
Friday, April 24, 2026
spot_img

ಇನ್ನೂ ಉದ್ಘಾಟನೆಯಾಗದಿರುವ ಮಾಲಗಂಭಗೆಗೆ ಸಿಡಿಲು ಬಡಿದು ಛಿದ್ರ ಛಿದ್ರ

ಹೊಸದಿಗಂತ ವರದಿ ಬಸವನಬಾಗೇವಾಡಿ:

ತಾಲೂಕಿನ ಉಕ್ಕಲಿ ಗ್ರಾಮದ ಅಮೋಘಸಿದ್ದೇಶ್ವರ ದೇವಸ್ಥಾನದ ಇನ್ನೂ ಉದ್ಘಾಟನೆಯಾಗದೆಯಿರುವ ಮಾಲಗಂಭಗೆ ಸಿಡಿಲು ಬಡಿದು ಛಿದ್ರ ಛಿದ್ರವಾಗಿ ಬಿದ್ದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಇಲ್ಲಕಲ್ ನಿಂದ ಕಲ್ಲು ತರಿಸಿ ಅಮೋಘಸಿದ್ದೇಶ್ವರ ದೇವಸ್ಥಾನದ ಮುಂದೆ 36ಪೂಟ್ ಎತ್ತರದ ಮಾಲಗಂಭ ಕಟ್ಟಿಗೆ ತರಹದ ಕೆತ್ತನೇ ಮಾಡಿ ಸು.48ಲಕ್ಷ ರೂ,ಖರ್ಚು ಮಾಡಿ ನಿರ್ಮಿಸಲಾಗುತ್ತಿತ್ತು ಇದಕ್ಕೆ ಗುರುವಾರ ತಡರಾತ್ರಿ ಸಿಡಿಲು ಬಡಿದು 11ಪೂಟ್ ಮಾಲಗಂಭ ಛಿದ್ರ ಛಿದ್ರವಾಗಿ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಭಯ ಬಿತ್ತರಾಗಿದ್ದಾರೆ. ಇನ್ನೂ ಉದ್ಘಾಟನೆಗೊಳ್ಳದ ಮಾಲಗಂಭದ ತಳ ಸರಿದು ಮಾಲಗಂಭ ಬೆಂಡ್ ಆಗಿದೆ ಎಂಬುವುದು ಗ್ರಾಮಸ್ಥರು ಮಾತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !