ಲಾರಿ-ಆಕ್ಟಿವಾ ನಡುವೆ ಅಪಘಾತ: ಬ್ಯಾಂಕ್ ಉದ್ಯೋಗಿ ಸಾವು

ಹೊಸ ದಿಗಂತ ವರದಿ, ಬಾಗಲಕೋಟೆ:

ನಗರದ ದಡ್ಡೇನವರ ಕ್ರಾಸ್ ಬಳಿ ಲಾರಿ ಹಾಗೂ ಆಕ್ಟಿವಾ ನಡುವೆ ಅಪಘಾತ ಸಂಭವಿಸಿ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ವಿಜಯಪುರದ ಮಧುವನ ಕಾಲೋನಿಯ ಭಾಗೀರಥಿ ಕುಂಬೇರಪ್ಪ ಕುಂಬಾರ (35) ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ಎಂದು ಗುರುತಿಸಲಾಗಿದೆ. ಮೃತರು ಬಾಗಲಕೋಟೆಯ ಯೂನಿಯನ್ ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದರು.

ಬಾಗಲಕೋಟೆಯ ಯೂನಿಯನ್ ಬ್ಯಾಂಕಿನಲ್ಲಿ ಸೇವೆ ಮುಗಿಸಿಕೊಂಡು ದಡ್ಡೇನವರ ಕ್ರಾಸ್ ಬಳಿ  ತೆರಳುತ್ತಿರುವಾಗ ಎಪಿಎಂಸಿ ಮಾರ್ಗದ ಕಡೆ ಹೋಗುವ ಲಾರಿ ಡಿಕ್ಕಿ ಹೊಡೆದು  ಗಂಭೀರವಾಗಿ ಗಾಯಗೊಂಡಿದ್ದ ಭಾಗೀರಥಿಯವರನ್ನು ಆಸ್ಪತ್ರೆಗೆ ಸೇರಿಸಿದಾರೂ ಬದುಕುಳಿಯಲಿಲ್ಲ.

ಅಪಘಾತ ನಡೆದ ಸ್ಥಳಕ್ಕೆ ನವನಗರ ವೃತ್ತ ಕಛೇರಿಯ ಸಿಪಿಐ ಎಸ್.ಎಂ.ಅವಜಿ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಬಣಕಾರ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!