ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕೂಟೇಲು ಸೇತುವೆಯ ಸಮೀಪ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದ್ಕೊಂಡು ಹೆದ್ದಾರಿಯಲ್ಲೇ ಮಗುಚಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ನಿಯುಕ್ತಿಗೊಂಡ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಇದರ ಚಾಲಕ ಮದ್ಯ ಸೇವಿಸಿದಂತಿದ್ದು, ಲಾರಿಯನ್ನು ಯದ್ವಾತದ್ವಾ ಚಲಾಯಿಸಿದ ಪರಿಣಾಮ ಲಾರಿ ನಿಯಂತ್ರಣ ಕಳೆದು ಕೊಂಡು ಹೆದ್ದಾರಿ ಮಧ್ಯೆ ಮಗುಚಿ ಬಿತ್ತು. ಈ ಪರಿಣಾಮ ಲಾರಿ ಚಾಲಕ ಮದ್ಯ ಪ್ರದೇಶದ ನಿವಾಸಿಗರಾದ ನಾರಾಯಣ್ ಕ್ಲೀನರ್ ಪುಷ್ಪೇಂದ್ರ ಮತ್ತಿಬ್ಬರು ಕಾರ್ಮಿಕರು ಗಾಯಗೊಂಡರು.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.