ಲೆ.ಜ. ವಿ.ಎಂ. ಪಾಟೀಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲೆ.ಜ. ವಿ.ಎಂ. ಪಾಟೀಲ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸೂಚಿಸಿದ್ದಾರೆ.
ಲೆ.ಜ. ವಿ.ಎಂ. ಪಾಟೀಲ್ ಅವರ ನಿಧನವಾರ್ತೆ ಅತೀವ ದುಃಖಕರ. ಭಾರತೀಯ ಸೈನ್ಯಕ್ಕೆ, ದೇಶದ ಸುರಕ್ಷತೆಗೆ ಅವರ ಕೊಡುಗೆ ಅದ್ವಿತೀಯ. ನಿವೃತ್ತಿಯ ನಂತರವೂ ಸಾಮಾಜಿಕವಾಗಿ ಸಕ್ರಿಯರಾಗಿದ್ದ ವಿ.ಎಂ.ಪಾಟೀಲರು ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಹಾಗೂ ಫೋರಂ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ (ಫಿನ್ಸ್) ಸಂಸ್ಥೆಯ ಉಪಾಧ್ಯಕ್ಷರಾಗಿ ಮಾರ್ಗದರ್ಶನ ಮಾಡಿದವರು. ಭಾರತದ ಆಂತರಿಕ ಸುರಕ್ಷೆಯ ವಿವಿಧ ಆಯಾಮಗಳ ಕುರಿತು ಅವರ‌ ಜ್ಞಾನ ಹಾಗೂ ಅನುಭವ ಅಪಾರ. ಶಿಸ್ತು-ಅನುಶಾಸನಕ್ಕೆ ಅವರ ನಡೆ-ನುಡಿಗಳು ಸದಾ ಅನುಪಮ ಉದಾಹರಣೆ. ಸೇನಾಕ್ಷೇತ್ರದ ಹಿರಿಯ ಮುತ್ಸದ್ಧಿಯೋರ್ವರವನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!