ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತೆರಳುತ್ತಿದ್ದ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಹೀಗಾಗಿ ಅವರು ರಸ್ತೆಯ ಮೂಲಕ ಪ್ರಯಾಣಿಸಿದ್ದಾರೆ.
ದುರ್ಗಾಪುರದಲ್ಲಿ ಆಯೋಜಿಸಲಾದ ಬೂತ್ ವಿಸ್ತರಣೆ ಕಾರ್ಯಕ್ರಮ ಮತ್ತು ಪ್ರಯೋಜನ ವಿತರಣಾ ಸಮಾರಂಭದಲ್ಲಿ ಭಾಗವಹಿಸಲು ಶಿವರಾಜ್ ಸಿಂಗ್ ಖುಜರಾಹೋ ತನಕ ಸಿಎಂ ಶಿವರಾಜ್ ವಿಶೇಷ ವಿಮಾನದಲ್ಲಿ ಬಂದರು.ಬಳಿಕ ಹೆಲಿಕಾಪ್ಟರ್ ಮೂಲಕ ನಾಗೋಡ ತಲುಪಿದರು.ಬಳಿಕ ಸಿಎಂ ದುರ್ಗಾಪುರ ಹೆಲಿಕಾಪ್ಟರ್ನಲ್ಲಿ ಹೋಗಬೇಕಿತ್ತು. ಕೊನೆ ಕ್ಷಣದಲ್ಲಿ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹಾಗಾಗಿ ನಾಗೌಡದಿಂದ ದುರ್ಗಾಪುರಕ್ಕೆ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದಾರೆ.
ನಗೌಡದಿಂದ ದುರ್ಗಾಪುರಕ್ಕೆ ರಸ್ತೆ ಮಾರ್ಗವಾಗಿ ಸಿಎಂ ತೆರಳಿದ್ದು, ಸತ್ನಾದಲ್ಲಿ ವಾಸ್ತವ್ಯ ಹೂಡಿದ್ದಾರೆ.