ಹೊಸದಿಗಂತ ವರದಿ ಮಡಿಕೇರಿ:
ಆಟೋ ಚಾಲಕನೊಬ್ಬ ಮಡಿಕೇರಿ ನಗರದ ಹೊರವಲಯದ ಕೂಟುಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಡಿಕೇರಿಯ ಆಜಾದ್ನಗರದ ನಿವಾಸಿ ಹನೀಫ್ ಎಂಬವರ ಪುತ್ರ ಸೈಫ್ (30)ಮೃತ ದುರ್ದೈವಿ.
ಶುಕ್ರವಾರ ತಡ ರಾತ್ರಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದರೆನ್ನಲಾಗಿದ್ದು, ತಕ್ಷಣ ಮನೆ ಮಂದಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಬಳಿಕ ಕೂಟುಹೊಳೆ ಬದಿಯಲ್ಲಿ ಅವರ ಆಟೋ ಹಾಗೂ ಅದರಲ್ಲಿ ಮೊಬೈಲ್ ಹಾಗೂ ಪರ್ಸ್ ಕಂಡುಬಂದಿದ್ದು, ಶನಿವಾರ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿ ಸೈಫು ಮೃತದೇಹವನ್ನು ಹೊರತೆಗೆದಿದ್ದಾರೆ.
ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.