ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಚುನಾವಣಾ ಆಯೋಗವು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ‘ಎರಡು ಖಡ್ಗಗಳು ಮತ್ತು ಶೀಲ್ಡ್ ಚಿಹ್ನೆ’ ಅನ್ನು ಹಂಚಿಕೆ ಮಾಡಿದೆ. ನಿನ್ನೆ ‘ಬಾಳಾಸಾಹೇಬಂಚಿ ಶಿವಸೇನಾ’ ಎಂಬ ಹೆಸರನ್ನು ನೀಡಲಾಯಿತು.
ಕೇಂದ್ರ ಚುನಾವಣಾ ಆಯೋಗದಿಂದ ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆ ಅವರಿಗೆ ನೀಡಲಾಗಿದ್ದ ಬಿಲ್ಲು-ಬಾಣದ ಚಿಹ್ನೆಯನ್ನು ರದ್ದುಗೊಳಿಸಿತ್ತು. ಈ ಬಳಿಕ, ಹೊಸ ಚಿಹ್ನೆ ನೀಡೋದಕ್ಕೆ ಆಯೋಗಕ್ಕೆ ಮನವಿ ಮಾಡಲಾಗಿತ್ತು.
ಈ ಬೆನ್ನಲ್ಲೇ ಇಂದು ಭಾರತೀಯ ಚುನಾವಣಾ ಆಯೋಗದಿದಂ ಶಿವಸೇನೆಯ ಏಕನಾಥ ಶಿಂಧೆ ಅವರ ಬಣಕ್ಕೆ ಎರಡು ಖಡ್ಗ ಗಳು ಮತ್ತು ಶೀಲ್ಡ್ ಚಿಹ್ನೆಯನ್ನು ಲಾಂಛನವಾಗಿ ಹಂಚಿಕೆ ಮಾಡಿದೆ.
ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣವನ್ನು ‘ಶಿವಸೇನಾ – ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಎಂದು ಮರುನಾಮಕರಣ ಮಾಡಲಾಗಿದೆ. ಈ ಬಣಕ್ಕೆ ‘ಉರಿಯುತ್ತಿರುವ ಪಂಜು’ ಚಿಹ್ನೆ ನೀಡಲಾಗಿದೆ.