ದಿಗಂತ ವರದಿ ವಿಜಯಪುರ:
ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ನಡೆದಿದೆ. ಇಲ್ಲಿನ ಶೇಖಪ್ಪ ಡೆಂಗಿ (40) ಮೃತಪಟ್ಟ ವ್ಯಕ್ತಿ.
ಶೇಖಪ್ಪ ಡೆಂಗಿ ಈತ ಕಾಲುವೆಯಲ್ಲಿನ ಮೋಟಾರಿಗೆ ನೀರು ಹಾಕಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ಅಸುನೀಗಿದ್ದಾನೆ. ಇದೇ ಸಂದರ್ಭ ಇನ್ನೊಬ್ಬ ವ್ಯಕ್ತಿ ಅಶೋಕ ಅಂಗಡಿಗೇರಿ (45) ಕಾಲುವೆ ನೀರಲ್ಲಿ ನಾಪತ್ತೆಯಾಗಿದ್ದು, ಈತನ ಶೋಧ ಕಾರ್ಯ ನಡೆಯುತ್ತಿದೆ. ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.