ಹೊಸದಿಗಂತ ವರದಿ ವಿಜಯಪುರ:
ಬಾಲಕನನ್ನು ವ್ಯಕ್ತಿಯೊಬ್ಬ ಅಪಹರಣಕ್ಕೆ ಯತ್ನಿಸಿರುವ ಘಟನೆ ನಗರದ ಶಹಾಪೇಟಿ ಬಡಾವಣೆಯಲ್ಲಿ ನಡೆದಿದೆ. ಇಲ್ಲಿನ ಭಾಸ್ಕರ್ ಗಂಗಾಧರ ಶಿರನಾಳ (11) ಎಂಬ ಬಾಲಕನನ್ನು ಕಿಡ್ನ್ಯಾಪ್ಗೆ ಯತ್ನಿಸಲಾಗಿದ್ದು, ಭಾಸ್ಕರ್ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾನೆ.
ಅಲ್ಲದೇ, ಭಾಸ್ಕರ್ ಕುಟುಂಬಸ್ಥರು ಆ ವ್ಯಕ್ತಿಯನ್ನು ಹಿಡಿಯಲು ಹೋದಾಗ ಆತ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಮೊದಲೇ ಮಕ್ಕಳ ಕಳ್ಳರ ವದಂತಿ ಎಲ್ಲೆಡೆ ಕೇಳಿ ಬರುತ್ತಿದ್ದು, ಪಾಲಕರು ಆತಂಕಗೊಳ್ಳುವಂತಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.