‘ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಧ್ಯಾನ ಕಡ್ಡಾಯ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಧ್ಯಾನ ಕಡ್ಡಾಯ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚಿಸಿದ್ದಾರೆ.

ಧ್ಯಾನ ಮಕ್ಕಳಿಗೆ ಬಹುಮುಖ್ಯ. ದೃಢತೆ, ಏಕಾಗ್ರತೆ, ಆರೋಗ್ಯ, ಒತ್ತಡ ಕಡಿತಕ್ಕೆ ಧ್ಯಾನ ಅತ್ಯಾವಶ್ಯ. ಹಾಗಾಗಿ ಪ್ರತಿದಿನ ಮಕ್ಕಳಿಗೆ ಮೆಡಿಟೇಶನ್ ಮಾಡಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಧ್ಯಾನದಿಂದ ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಇದೊಂದು ಒಳ್ಳೆಯ ಹವ್ಯಾಸ, ಇದನ್ನು ಬೆಳೆಸಿಕೊಂಡು ಹೋಗಿ ಅವರು ಉತ್ತಮ ಪ್ರಜೆಯಾಗಬೇಕು ಎಂದಿದ್ದಾರೆ.

ರಾಜ್ಯದ ಕೆಲ ಶಾಲೆಗಳಲ್ಲಿ ಈಗಾಗಲೇ ಧ್ಯಾನ ಮಾಡಿಸುವ ಅಭ್ಯಾಸ ಇದೆ, ಎಲ್ಲ ಶಾಲೆಗಳಲ್ಲಿಯೂ ಈ ಅಭ್ಯಾಸ ಆರಂಭವಾಗಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!