ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಾರ್ಚ್ ಕೊನೆಯ ಶನಿವಾರವಾದ ಇಂದು ವಿಶ್ವದಲ್ಲಿ ವಿಶೇಷ ವಾರ್ಷಿಕ ಜಾಗತಿಕ ಕಾರ್ಯಕ್ರಮ ‘ಅರ್ಥ್ ಅವರ್’ (Earth Hour) ಅನ್ನು ಜನರು ಆಚರಿಸಿಕೊಂಡಿದ್ದಾರೆ.
ಭಾರತ ಸಹಿತ ಸುಮಾರು 190 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಿಂದ ಲಕ್ಷಾಂತರ ಜನರು ರಾತ್ರಿ 8.30ರಿಂದ 9:30 ರವರೆಗೆ ಒಂದು ಗಂಟೆಗಾಲ ಕಾಲ ಎಲ್ಲಾ ದೀಪಗಳನ್ನು ಆಫ್ ಮಾಡುವ ಮೂಲಕ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.
ಭಾರತದಲ್ಲೂ ಉತ್ತಮ ಬೆಂಬಲ ಸಿಕ್ಕಿದ್ದು, ದೆಹಲಿಯ ರಾಷ್ಟ್ರಪತಿ ಭವನ ಮತ್ತು ಅಕ್ಷರಧಾಮ ದೇವಸ್ಥಾನ, ಕೋಲ್ಕತ್ತಾದ ಹೌರಾ ಸೇತುವೆ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೊದಲ ಕಡೆ ರಾತ್ರಿ 8:30 ರಿಂದ 9:30 ರವರೆಗೆ ಒಂದು ಗಂಟೆ ಕಾಲ ದೀಪಗಳನ್ನು ಆಫ್ ಮಾಡಿ ಬೆಂಬಲಿಸಿದ್ದಾರೆ.