ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇಂದು ನಡೆದ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ತಾಯಿ, ಮಗ ಸಾವನ್ನಪ್ಪಿದ ಘಟನೆ ಸಂಬಂಧ ಬಿಎಂ ಆರ್ ಸಿಎಲ್ ಮುಖ್ಯ ಇಂಜಿನಿಯರ್ ಸೇರಿದಂತೆ ಎಲ್ಲಾ ಇಂಜಿನಿಯರ್ ಗಳನ್ನು ಅಮಾತನಗೊಳಿಸಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿ ಮಹತ್ವದ ಸಭೆ ನಡೆಸಿದ ಸಿಎಂ , ಘಟನೆ ಕುರಿತು ಬಿಎಂಆರ್ ಸಿ ಎಂಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ವಿವಿಧ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಸಾವಿಗೆ ಕಾರಣವಾದ ಹಿನ್ನಲೆ ಸಭೆಯಲ್ಲಿಯೇ ಬಿಎಂಆರ್ ಸಿಎಲ್ ಮುಖ್ಯ ಇಂಜಿನಿಯರ್ ಸೇರಿದಂತೆ ಎಲ್ಲಾ ಇಂಜಿನಿಯರ್ ಗಳ ಅಮಾನತುಗೊಳಿಸಿ ಆದೇಶಿಸಿದರು.
ಇದರ ಜೊತೆಗೆ ಎನ್ ಸಿಸಿ ಕಂಪನಿಯ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.