ಆಹಾರ, ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮೇಲೆ ದುಷ್ಕರ್ಮಿಗಳ ಹಲ್ಲೆ: ಪ್ರಕರಣ ದಾಖಲು

ದಿಗಂತ ವರದಿ ವಿಜಯಪುರ:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ.

ವಿಜಯಪುರ ನಗರ ಆಹಾರ ನಿರೀಕ್ಷಕ ನಯೀಮ್ ಅತ್ತಾರ ಅವರ ಇಲ್ಲಿನ ರಹೀಂ ನಗರದ ನಿವಾಸಕ್ಕೆ ತೆರಳಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಅಕ್ರಮವಾಗಿ ಅಡುಗೆ ಅನಿಲ ಆಟೋಗಳಿಗೆ‌ ಭರಿಸುವ ವೇಳೆ ಈ ಅಧಿಕಾರಿ ದಾಳಿ ಮಾಡಿದ್ದರು. ಅಧಿಕಾರಿ ನಯೀಮ್ ಗುರುವಾರ ಮಧ್ಯಾಹ್ನ ನಗರದ ಸೆಟ ಲ್ಯಾಟ್ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಆಟೋಗಳಗೆ ಎಲ್ಪಿಜಿ ಗ್ಯಾಸ್ ಭರಿಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ್ದರು.

ಶಬ್ಬೀರ್ ಜಮಖಂಡಿ ಎಂಬಾತ ಅಕ್ರಮವಾಗಿ ಎಲ್ಪಿಜಿ ಗ್ಯಾಸ್ ಆಟೋಗಳಿಗೆ ಭರಿಸುತ್ತಿದ್ದ.
ಇದನ್ನು ತಡೆದು ಅಕ್ರಮ ಸಿಲಿಂಡರ್ ವಶಪಡಿಸಿಕೊಂಡು ಆಹಾರ ನಿರೀಕ್ಷಕ ನಯೀಮ್ ಸೀಜ್ ಮಾಡಿದ್ದರು. ಈ ಸಿಟ್ಟಿನಿಂದ ಶಬ್ಬೀರ್ ಜಮಖಂಡಿ‌ ಹಾಗೂ ಸೋನು ನದಾಫ್ ಮತ್ತು ಇತರರು ಸೇರಿ ಆಹಾರ ನಿರೀಕ್ಷಕ ಮನೆಯಲ್ಲಿದ್ದಾಗ ಮನೆಗೆ ನುಗ್ಗಿ ದಾಂದಲೆ ಮಾಡಿ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆಗೊಳಗಾದ ಆಹಾರ ನಿರೀಕ್ಷಕ ನಯೀಮ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಆರೋಪಿಗಳಾದ ಶಬ್ಬೀರ್ ಜಮಖಂಡಿ, ಸೋನು ನದಾಫ್ ಸೇರಿ ಇತರರ ಮೇಲೆ
ಗಾಂಧಿಚೌಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!