ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸಚಿವ ಅಮಿತ್ ಶಾ ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿರುವ ಡಾ. ಸಿ ಎನ್ ಮಂಜುನಾಥ್ ಅವರು ಭಾಗವಹಿಸಿದರು.
ಈ ವೇಳೆ ಮಾತನಾಡಿದ ಅವರು, ಮೋದಿಯವರು 400 ಸಂಸದರನ್ನು ಕಳಿಸಿಕೊಡಿ ಎಂದಿದ್ದಾರೆ.ಅದರಲ್ಲಿ ನಾನು ಒಬ್ಬನಾಗುತ್ತೇನೆ. ಚನ್ನಪಟ್ಟಣದಿಂದ ಅಮಿತ್ ಶಾ ಪ್ರಚಾರಕ್ಕೆ ಚಾಲನೆ ನೀಡಿದ ಸಂತಸ ತಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣ ದಿಂದಲೇ ಬದಲಾವಣೆ ಗಾಳಿ ಶುರುವಾಗಿದೆ. ಜನಸಾಗರ ನೋಡಿದರೆ ಗೆಲುವು ನನ್ನದೇ. ಜನ ಬದಲಾವಣೆ ಬಯಸಿದ್ದಾರೆ 400ಕ್ಕೂ ಹೆಚ್ಚು ಸಂಸದರನ್ನು ಕಳುಹಿಸಿಕೊಡಿ ಅಂತ ಪ್ರಧಾನಿ ಮೋದಿ ಅವರು ಹೇಳಿದ್ದಾರೆ 400 ಸಂಸದರಲ್ಲಿ ನಾನು ಒಬ್ಬನಾಗಿರುತ್ತೇನೆ ಎಂದು ಸಿ ಎಸ್ ಮಂಜುನಾಥ್ ಹೇಳಿದ್ದಾರೆ.