ಹೊಸದಿಗಂತ ಡಿಜಿಟಲ್ ಡೆಸ್ಕ್:
ಖುದ್ದು ಚಹಾ ಮಾರುವ ಹಿನ್ನೆಲೆಯ ಶ್ರಮಿಕ ಬಡ ಕುಟುಂಬದಿಂದ ಬಂದಿರುವುದರಿಂದಲೋ ಏನೋ, ನರೇಂದ್ರ ಮೋದಿಯವರಿಗೆ ಶ್ರಮಜೀವಿಗಳ ಬಗ್ಗೆ ವಿಶೇಷ ಅಕ್ಕರೆ. 2019ರಲ್ಲಿ ಪ್ರಯಾಗರಾಜದ ಕುಂಭಮೇಳದಲ್ಲಿ ಅವರು ಸ್ವಚ್ಛತಾಕರ್ಮಿಗಳ ಪಾದ ತೊಳೆದು ಗೌರವ ಸಮರ್ಪಿಸಿದ್ದರು. ಕಾಶಿ ವಿಶ್ವನಾಥಧಾಮ ನಿರ್ಮಿಸಿದ ಕಾರ್ಮಿಕರ ಮಧ್ಯೆ ಕುಳಿತು ಹರಟುತ್ತ, ಅವರ ಜತೆ ಭೋಜನ ಮಾಡಿದರು. ನಿರ್ಮಾಣಹಂತದಲ್ಲಿರುವ ಹೊಸ ಸಂಸತ್ಭವನದ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿನ ಕಾರ್ಮಿಕರ ಜತೆಯೇ ವಿಶೇಷವಾಗಿ ಸಂವಾದ ನಡೆಸಿದರು.
(ಸ್ವಚ್ಛತಾ ಕಾರ್ಮಿಕರ ಪಾದ ತೊಳೆಯುತ್ತಿರೋ ಮೋದಿ)