ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನ ಮೊಹಾಲಿಯಂತೆ ಶಿಮ್ಲಾದ ಮೇಲೂ ದಾಳಿಯಾಗಬಹುದು ಎಂದು ಹಿಮಾಚಲ ಪ್ರದೇಶದ ಸಿಎಂ ಜೌರಾಮ್ ಠಾಕೂರ್ ಅವರಿಗೆ ಖಾಲಿಸ್ಥಾನಿ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ ಎಚ್ಚರಿಕೆ ನೀಡಿದ್ದು ಹಿಮಾಚಲ ಪೋಲೀಸರ ಮೇಲೂ ದಾಳಿ ನಡೆಯಬಹುದು ಎಂದಿದೆ.
ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ನ ಇಂಟೆಲಿಜೆನ್ಸ್ ವಿಂಗ್ ಪ್ರಧಾನ ಕಛೇರಿಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆದ ಮರುದಿನವೇ ಖಲಿಸ್ತಾನಿ ಸಂಘಟನೆಯ ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಸ್ವಯಂಘೋಷಿತ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್ ಆಡಿಯೋ ಸಂದೇಶವೊಂದರಲ್ಲಿ “ಈ ಗ್ರೆನೇಡ್ ದಾಳಿ ಹಿಮಾಚಲ ಪ್ರದೇಶದ ಪೋಲೀಸ್ ಕೇಂದ್ರ ಕಛೇರಿಯ ಮೇಲೂ ನಡೆಯಬಹುದು” ಎಂದು ಎಚ್ಚರಿಕೆ ನೀಡಿದ್ದಾನೆ.
ಸಿಖ್ ಸಮಾಜವನ್ನು ಕೆಣಕಬೇಡಿ. ಪಂಜಾಬ್ ನಲ್ಲಾದ ದಾಳಿಯಿಂದ ಪಾಠಕಲಿತುಕೊಳ್ಳಿ ಎಂದೂ ಕೂಡ ಬೆದರಿಕೆ ಹಾಕಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.