ಹೊಸದಿಗಂತ ವರದಿ,ಮೈಸೂರು:
ಪರ ಪುರುಷನೊಂದಿಗೆ ತಾಯಿ ಹೊಂದಿದ್ದ ಅಕ್ರಮ ಸಂಬಂಧಧದಿo ದ ಮನನೊಂದು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಹುಣಸನಾಳು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹದೇವ ಶೆಟ್ಟಿ ಎಂಬುವರ ಪುತ್ರ ಮಹೇಂದ್ರ ಮೃತ ದುರ್ಧೆವಿ.
ಅನೈತಿಕ ಸಂಬoಧದ ಬಗ್ಗೆ ಗಂಡ ಹೆಂಡತಿಯ ನಡುವೆ ಗಲಾಟೆ ನಡೆದಿತ್ತು. ನಡತೆ ಸರಿ ಮಾಡಿಕೊಳ್ಳುವಂತೆ ಗಂಡ ಎಷೇ ಬುದ್ಧಿವಾದ ಹೇಳಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಈ ವಿಷಯ ಮಗನಿಗೆ ತಿಳಿದ ಮೇಲೆ ಮನೆಯಲ್ಲಿ ರಾತ್ರಿಯ ಸಮಯದಲ್ಲಿ ಎಲ್ಲರೂ ಮಲಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.