ಹೊಸದಿಗಂತ ವರದಿ,ಶಿವಮೊಗ್ಗ:
ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಡಿಸೆಂಬರ್ 31 ಮತ್ತು ಜನವರಿ 01 ರಂದು ಪ್ರತಿದಿನ ಸಂಜೆ 6.00ಕ್ಕೆ ಟಿಪ್ಪು ನಿಜಕನಸುಗಳು ನಾಟಕದ ವಿಶೇಷ ರಂಗಪ್ರಯೋಗ ಪ್ರದರ್ಶನ ಆಯೋಜಿಸಲಾಗಿದೆ.
ಈ ನಾಟಕ ಮೂರುವರೆ ತಾಸುಗಳ ಅವಯದ್ದಾಗಿದ್ದು, 10 ನಿಮಿಷಗಳ ಮಧ್ಯಂತರ ವಿರಾಮವಿದೆ. ಪ್ರದರ್ಶನಕ್ಕೆ 100 ರೂ. ಬೆಲೆಯ ಟಿಕೆಟ್ಗಳನ್ನು ಇಡಲಾಗಿದೆ. ಶಿವಮೊಗ್ಗ ರಂಗಾಯಣ ಕಛೇರಿಯಲ್ಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಟಿಕೆಟ್ಗಳು ಲಭ್ಯವಿದೆ. ರಂಗಾಯಣದ ವೆಬ್ಸೈಟ್ www.rangayana.org ನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಪಡೆಯಬಹುದಾಗಿದೆ.
ಇಂತಹದೊಂದು ವಿಶೇಷ ರಂಗಪ್ರಯೋಗದ ಸತ್ಯದ ಅನಾವರಣಕ್ಕೆ ಎಲ್ಲಾ ರಂಗಾಸಕ್ತರು, ರಂಗಕರ್ಮಿಗಳು, ಕಲಾವಿದರು, ಸಾಹಿತಿಗಳು ಸಾಕ್ಷಿಗಳಾಗಬೇಕೆಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮನವಿ ಮಾಡಿದ್ದಾರೆ.
ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಖ್ಯಾತ ರಂಗವಿನ್ಯಾಸಕ ಶಶಿಧರ್ ಅಡಪ, ವಸ-ಪರಿಕರ ವಿನ್ಯಾಸಕ ಪ್ರಮೋದ್ ಶಿಗ್ಗಾಂವ್, ಸಂಗೀತಕ್ಕೆ ಧನಂಜಯ ಆರ್.ಸಿ. ಮತ್ತು ಸುಬ್ರಹ್ಮಣ್ಯ ಮೈಸೂರು, ಬೆಳಕಿನ ವಿನ್ಯಾಸ ಮಹೇಶ್ ಕಲ್ಲತ್ತಿ ಕೈ ಜೋಡಿಸಿದ್ದಾರೆ.