ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನಲ್ಲಿ ಚಾತುರ್ಮಾಸ್ಯ ವೃತ ಮುಗಿಸಿ ಉಡುಪಿಗೆ ಆಗಮಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಸೋಮವಾರ ನೀಲಾವರ ಗೋಶಾಲೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಭಕ್ತರೊಬ್ಬರು ದಾನವಾಗಿ ನೀಡಿದ್ದ ಆಡಿನ ಮರಿಗೆ ಹಸಿಎಲೆ ನೀಡಿ ಪ್ರಾಣಿಪ್ರೀತಿ ತೋರಿದರು. ಭಕ್ತರೊಬ್ಬರು ದಾನವಾಗಿ ನೀಡಿದ ಆಡಿನ ಮರಿ ಇದಾಗಿದ್ದು, ರಾಮ ಮತ್ತು ಜಾನಕಿ ಎಂಬ ಜೋಡಿ ಆಡಿನ ಮರಿಗಳು ನೀಲಾವರ ಗೋ ಶಾಲೆಯಲ್ಲಿ ಪೋಷಣೆ ಪಡೆಯುತ್ತಿದೆ.