ಸಿದ್ದೇಶ್ವರ ಶ್ರೀಗಳಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿದೆ: ಡಾ. ಎಸ್.ಬಿ. ಪಾಟೀಲ್

ಹೊಸದಿಗಂತ ವರದಿ, ವಿಜಯಪುರ:

ಅಸ್ವಸ್ಥಗೊಂಡಿರುವ ಸಿದ್ದೇಶ್ವರ ಶ್ರೀಗಳಿಗೆ ಉಸಿರಾಟ ಸಮಸ್ಯೆ ಹೆಚ್ಚಾಗಿದ್ದು, ಆಕ್ಸಿಜನ್ ನೀಡಲಾಗುತ್ತಿದೆ ಎಂದು
ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಎಸ್.ಬಿ. ಪಾಟೀಲ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಸಂಜೆ ಮಾಹಿತಿ ನೀಡಿದ ಅವರು, ಶ್ರೀಗಳಿಗೆ ಬಿಪಿಯಲ್ಲಿ ವ್ಯತ್ಯಾಸ ಆಗಿದೆ. ಚಿಕಿತ್ಸೆಗೆ ಬೇಕಾದ ಮೆಡಿಕಲ್ ಮೆಟಿರಿಯಲ್ಸ್ ಎಲ್ಲಾ ಸನ್ನದ್ದವಾಗಿವೆ. ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲಾ ಎಕ್ಯೂಪಮೆಂಟ್ ತರಲಾಗಿದೆ. ಬೆಳಗ್ಗೆ ಗಂಜಿ ಕುಡಿದಿದ್ದು ಅಷ್ಟೆ, ಅದಾದ ನಂತರ ಅಹಾರ ಸೇವಿಸಿಲ್ಲ ಎಂದರು.
ಅಲ್ಲದೇ, ಆಸ್ಪತ್ರೆಗೆ ನಿರಾಕರಣೆ ಮಾಡುತ್ತಿದ್ದಾರೆ. ಅವರ ಅಣತಿಯಂತೆ ನಾವು ನಡೆಯುತ್ತಿದ್ದೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!