ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಇಂದು ಮಂಗಳೂರಿನ ವಿಮಾನ ನಿಲ್ದಾಣ ಕಾಣಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಧೋನಿ ಕೃಷಿ ಕಡೆ ಚಿತ್ತ ಹರಿಸಿದ್ದಾರೆ. ಜೊತೆಗೆ ಹಲವು ಸಮಾರಂಭಗಳಿಗೆ ಅತಿಥಿಯಾಗಿ ತೆರಳುತ್ತಾರೆ.
ಇದೇ ರೀತಿ ಕ್ಯಾಪ್ಟನ್ ಕೂಲ್ ಮಂಗಳೂರಿನ ವಿಮಾನ ನಿಲ್ದಾಣ ಆಗಮಿಸಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೋನಿ ಆಗಮಿಸಿದರು.ಬಳಿಕ ರಸ್ತೆ ಮೂಲಕ ಸಂಚಾರ ಬೆಳೆಸಿದ್ದಾರೆ.
ಮಂಗಳೂರಿನಲ್ಲಿ ಧೋನಿಯನ್ನುಶಾಸಕ ಖಾದರ್ ಸಹೋದರ ಯು.ಟಿ.ಇಫ್ತಿಕಾರ್ ಬರ ಮಾಡಿಕೊಂಡರು.
ಕಾಸರಗೋಡಿನ ಬೇಕಲ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಧೋನಿ ತೆರಳಿದ್ದಾರೆ.