ಕಾಶ್ಮೀರದಲ್ಲಿ ಮುಂದುವರೆದ ಹಿಂದುಗಳ ಹತ್ಯೆ: ಬ್ಯಾಂಕ್‌ ಉದ್ಯೋಗಿಯನ್ನು ಕೊಂದ ಭಯೋತ್ಪಾದಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಹಿಂದುಗಳನ್ನು ಗುರಿಯಾಗಿಸಿ ಕೊಲೆ ಮಾಡುತ್ತಿರುವುದು ಮುಂದುವರೆದಿದ್ದು ಕುಲ್ಗಾಮ್‌ ನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಮೋಹನ್‌ ಪೋರಾದಲ್ಲಿರುವ ಎಲ್ಲಕ್ವೈ ದೇಹತಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ವಿಜಯ್‌ ಕುಮಾರ್‌ ಎಂಬುವವರ ಮೇಲೆ ಭಯೋತ್ಫಾದಕರು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರು ರಾಜಸ್ಥಾನ ಮೂಲದ ಹನುಮಾನ್ ಗಢದವರೆಂದು ಹೇಳಲಾಗಿದೆ.

ಕಾಶ್ಮೀರದಲ್ಲಿ ಹಿಂದುಗಳನ್ನು ಉದ್ದೇಶಿಸಿ ಕೊಲೆ ಮಾಡಲಾಗುತ್ತಿರುವ ಘಟನೆಗಳು ಹೆಚ್ಚುತ್ತಿದ್ದು ರಾಹುಲ್‌ ಭಟ್‌, ನಟಿ ಅಮ್ರೀನ್‌ ಭಟ್‌, ಶಿಕ್ಷಕಿ ರಜನಿ ಭಾಲಾ ಈಗ ವಿಜಯ ಕುಮಾರ್‌ ಭಯೊತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!