ಹೊಸದಿಗಂತ ವರದಿ,ವಿಜಯಪುರ :
ಹೆತ್ತ ಮಗನಿಗೆ ಸುಪಾರಿ ನೀಡಿ ಮಗನನ್ನೆ ಕೊಲೆ ಮಾಡಿಸಿರುವ ತಾಯಿ ಸೇರಿದಂತೆ ಐವರು ಆರೋಪಿಗಳನ್ನು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಗರದ ಶ್ರೀದೇವಿ ಯಕ್ಕುಂಡಿ ಹೆತ್ತ ಮಗನಿಗೆ ಸುಪಾರಿ ನೀಡಿದ ತಾಯಿ ಹಾಗೂ ಪ್ರಕಾಶ ಗೊಲ್ಲರ್, ರಾಹುಲ್ ಗೊಲ್ಲರ್, ರಾಘವೇಂದ್ರ ಸಾಠೆ, ಸಂತೋಷ ಬಿದರಿ ಬಂಧಿತ ಆರೋಪಿಗಳು.
ನಗರದ ಮಲ್ಲಿಕಾರ್ಜುನ ಯಕ್ಕುಂಡಿ ಮೃತಪಟ್ಟಿರುವ ವ್ಯಕ್ತಿ.
ಇನ್ನು ದಿನನಿತ್ಯ ಕುಡಿದ ನಶೆಯಲ್ಲಿ ತಾಯಿ ಶ್ರೀದೇವಿಗೆ ಮಗ ಮಲ್ಲಿಕಾರ್ಜುನ ಕಿರುಕುಳ ನೀಡುತ್ತಿದ್ದನು. ಹೀಗಾಗಿ ಈ ವಿಷಯಕ್ಕೆ ಶ್ರೀದೇವಿ ಬೇಸತ್ತು ಮಗನ ಹತ್ಯೆಗೆ ಸುಪಾರಿ ನೀಡಿದ್ದಳು. ಇನ್ನು ಆರೋಪಿಗಳು ಮಲ್ಲಿಕಾರ್ಜುನನ್ನು ಹತ್ಯೆಗೈದು ನಗರ ಹೊರಭಾಗದ ಗಾಂಧಿನಗರ ಬಳಿಯ ಖಣಿಯಲ್ಲಿ ಎಸೆದು ಪರಾರಿಯಾಗಿದ್ದರು.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.