ಜಗಳ ಬಿಡಿಸಲು ಹೋಗಿದ್ದ ಇಬ್ಬರನ್ನು ಕೊಚ್ಚಿ ಕೊಲೆ: ಆರೋಪಿಗಳ ಬಂಧನ

ಹೊಸದಿಗಂತ ವರದಿ, ಶಿವಮೊಗ್ಗ:
ತಮ್ಮ ಮನೆಯೊಳಗಿನ ಜಗಳದಲ್ಲಿ ಮಧ್ಯಪ್ರವೇಶ ಮಾಡಿದ್ದಾರೆಂಬ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರನ್ನು ಕೊಲೆ ಮಾಡಿರುವ ಘಟನೆ ನಗರದ ಸೂಳೆಬೈಲಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೂಳೆಬೈಲು ನಿವಾಸಿ ಸಲೀಂ (22) ಹಾಗೂ ಅಬ್ದುಲ್ (23) ಕೊಲೆಯಾಗಿದ್ದು, ಅದೇ ಬಡಾವಣೆಯ ಟಿಪ್ಪು ಹಾಗೂ ಸಹಚರರು ಕೊಲೆ ಮಾಡಿದ್ದಾರೆ.
ಶನಿವಾರ ತಡ ರಾತ್ರಿ ಟಿಪ್ಪು ತನ್ನ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾಗ ಈ ಇಬ್ಬರು ಹೋಗಿ ಜಗಳ ಬಿಡಿಸಿದ್ದರು. ಇದನ್ನು ಸಹಿಸದ ಟಿಪ್ಪು ತನ್ನ ಸಹಚರರಾದ ಅಲ್ಲಾಭಕ್ಷಿ, ಜಬೀವುಲ್ಲಾ, ದಾದಾಫೀರ್, ವಸೀಂ ಮತ್ತು ನಸ್ರುಲ್ಲಾರವರೊಂದಿಗೆ ಸೇರಿ ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತುಂಗಾ ನಗರ ಪೊಲೀಸರು ಆರೋಪಿತರಾದ ದಾದಾಫೀರ್ (21), ‌ ಅಲ್ಲಾಭಕ್ಷಿ (21)ಯನ್ನು ಭಾನುವಾರ ಬಂಧಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!